HEALTH TIPS

ಸಾಕ್ಷಿಗಳನ್ನು ಬೆದರಿಸಿದ ಆರೋಪ: ಪೊಲೀಸರ ವಿರುದ್ಧ ತನಿಖೆ ನಡೆಸಲು ಡಿಜಿಪಿಗೆ ಸೂಚನೆ

            ವದೆಹಲಿ: ದೂರುದಾರರ ಪರ ಸಾಕ್ಷಿ ಹೇಳಲು ಬಂದಿದ್ದವರಿಗೆ ಹೇಗೆ ಸಾಕ್ಷಿ ಹೇಳಬೇಕು ಎಂದು ಹೇಳಿಕೊಟ್ಟ ಪೊಲೀಸರ ವಿರುದ್ಧ ತನಿಖೆ ನಡೆಸುವಂತೆ ತಮಿಳುನಾಡು ಪೊಲೀಸ್‌ ಮಹಾನಿರ್ದೇಶಕರಿಗೆ (ಡಿಜಿಪಿ) ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಪೊಲೀಸರ ಈ ಕೃತ್ಯವು 'ನಿರ್ಲಜ್ಜ' ಮತ್ತು 'ಆತಂಕಕಾರಿ' ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ.

            2007ರಲ್ಲಿ ನಡೆದಿದ್ದ ಬಾಲಮುರುಗನ್‌ ಎಂಬುವವರ ಹತ್ಯೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಮಣಿಕಂದನ್, ಮತ್ತೊಬ್ಬ ವ್ಯಕ್ತಿಯನ್ನು ಬಿಡುಗಡೆಗೊಳಿಸಿದ ನ್ಯಾಯಮೂರ್ತಿಗಳಾದ ಅಭಯ್‌ ಎಸ್‌. ಒಕಾ ಮತ್ತು ಉಜ್ವಲ್ ಭುಯಿಯಾ ಅವರಿದ್ದ ನ್ಯಾಯಪೀಠವು ಏಪ್ರಿಲ್‌ 5ರಂದು ಹೀಗೆ ಹೇಳಿದೆ.

         ಮೃತವ್ಯಕ್ತಿ ಪರ ಐವರನ್ನು, ಅವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವ ಹಿಂದಿನ ದಿನ ಪೊಲೀಸ್‌ ಠಾಣೆಗೆ ಕರೆಸಿಕೊಂಡು, ಆರೋಪಿ ವಿರುದ್ಧ ಹೇಗೆ ಸಾಕ್ಷಿ ಹೇಳಬೇಕು ಎಂದು ಪೊಲೀಸರು ಹೇಳಿಕೊಟ್ಟಿದ್ದರು. ಸಾಕ್ಷಿ ಹೇಳಲು ಬಂದಿದ್ದ ಎಲ್ಲರೂ ಮೃತವ್ಯಕ್ತಿಯ ಆಪ್ತರಾಗಿದ್ದರು. ಆದರೆ, ಅವರು ಹೇಳಿರುವ ಸಾಕ್ಷಿಯು ಪೊಲೀಸರು ಹೇಳಿಕೊಟ್ಟಿರುವ ಸಾಕ್ಷಿ ಆಗಿರುವ ಸಾಧ್ಯತೆ ಇರುವುದರಿಂದ ಅವರ ಸಾಕ್ಷಿಗಳನ್ನು ಪರಿಗಣಿಸಲಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ.

            ಈ ಸೂಕ್ಷ್ಮ ಸಂಗತಿಯನ್ನು ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ ಗಮನಿಸದೇ ಇದ್ದುದು ಆಶ್ಚರ್ಯ ತರಿಸಿದೆ ಎಂದೂ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries