HEALTH TIPS

ರೈಲು ಡಿಕ್ಕಿಯಾಗಿ ಕಾಡಾನೆಗೆ ಗಂಭೀರ ಗಾಯ: ಲೋಕೊ ಪೈಲಟ್ ವಿರುದ್ಧ ಕೇಸ್

               ಪಾಲಕ್ಕಾಡ: ರೈಲೊಂದು ಡಿಕ್ಕಿಯಾಗಿ ಕಾಡಾನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ ಜಿಲ್ಲೆಯಲ್ಲಿ ನಡೆದಿದೆ.

              ಗುರುವಾರ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಆನೆಗೆ ರೈಲು ಹಳಿ ಪಕ್ಕವೇ ಪಶು ವೈದ್ಯರು ಚಿಕಿತ್ಸೆ ಪ್ರಾರಂಭಿಸಿದ್ದಾರೆ. ಅಲ್ಲಿಯೇ ಆಹಾರ ನೀಡಿದ್ದಾರೆ. ಆದರೂ ಆನೆ ಚೇತರಿಸಿಕೊಳ್ಳುತ್ತಿಲ್ಲ.

            'ಆನೆಯ ಹಿಂಗಾಲುಗಳಿಗೆ ಗಂಭೀರ ಗಾಯಗಳಾಗಿವೆ. ಎದ್ದು ನಿಲ್ಲಲು ಆಗುತ್ತಿಲ್ಲ' ಎಂದು ತ್ರಿಶೂರ್ ವಲಯದ ಅರಣ್ಯ ಪಶುವೈಧ್ಯಾಧಿಕಾರಿ ಡಾ. ಡೇವಿಡ್ ಅಬ್ರಾಂ ತಿಳಿಸಿದ್ದಾರೆ.

             ರೈಲು ಡಿಕ್ಕಿಯಾಗಿ ಆನೆ ಗಾಯಗೊಂಡಿದೆ. ಆದರೆ ಯಾವ ರೈಲು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅಪರಿಚಿತ ಲೋಕೊ ಪೈಲಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

                ಆನೆ ಶೀಘ್ರ ಚೇತರಿಸಿಕೊಳ್ಳಲು ಆಗದಿದ್ದರೇ ಅದನ್ನು ವಳಯಾರ್ ಪಶು ಆಸ್ಪತ್ರೆಗೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries