HEALTH TIPS

ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪಕ್ಕೆ ತಕ್ಕ ಉತ್ತರ: ಜೈಶಂಕರ್

           ಹಮದಾಬಾದ್‌: ಭಾರತದ ಆಂತರಿಕ ವಿಷಯಗಳ ಕುರಿತು ಅನಗತ್ಯ ರಾಜಕೀಯ ಪ‍್ರೇರಿತ ಹೇಳಿಕೆ ನೀಡುವ ದೇಶಗಳಿಗೆ ಕಠಿಣ ಎಚ್ಚರಿಕೆ ನೀಡಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, 'ಇಂತಹ ಹಸ್ತಕ್ಷೇಪಗಳಿಗೆ ಬಲವಾದ ಪ್ರತ್ಯುತ್ತರ ನೀಡಲಾಗುವುದು' ಎಂದು ಮಂಗಳವಾರ ಹೇಳಿದ್ದಾರೆ.

            ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ವಿಚಾರವಾಗಿ ಇತ್ತೀಚೆಗೆ ಅಮೆರಿಕ, ಜರ್ಮನಿ ಹಾಗೂ ವಿಶ್ವಸಂಸ್ಥೆಯ ರಾಯಭಾರಿಗಳು ನೀಡಿದ್ದ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರು ಅಂತರರಾಷ್ಟ್ರೀಯ ಸಮುದಾಯಕ್ಕೆ ಈ ಎಚ್ಚರಿಕೆ ನೀಡಿದ್ದಾರೆ.

               'ಕೇಜ್ರಿವಾಲ್‌ ಬಂಧನ ಕುರಿತು ವಿಶ್ವಸಂಸ್ಥೆ ಪ್ರತಿನಿಧಿಯೊಬ್ಬರಿಗೆ ಯಾರೋ ಪ್ರಶ್ನಿಸಿದರು. ಅದಕ್ಕೆ ಅವರು ಏನೋ ಉತ್ತರ ನೀಡಿದ್ದರು. ಇತರ ಹಲವು ಪ್ರಕರಣಗಳಿಗೆ ಈ ಹಿಂದೆಯೂ ಪ್ರತಿಕ್ರಿಯೆಗಳನ್ನು ನೀಡಲಾಗಿದೆ. ಆದರೆ, ಈ ರೀತಿ ಹೇಳಿಕೆ ನೀಡುವುದು ಹಳೆಯ ಮತ್ತು ಕೆಟ್ಟ ಚಾಳಿ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

                'ಪ್ರತಿಯೊಂದು ದೇಶದ ಸಾರ್ವಭೌಮತೆಯನ್ನು ಗೌರವಿಸುವುದು ಮುಖ್ಯ' ಎಂದ ಅವರು, 'ದೇಶಗಳು ಪರಸ್ಪರರ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಬಾರದು' ಎಂದೂ ಹೇಳಿದರು.

'ಅಂತರರಾಷ್ಟ್ರೀಯ ಸಂಬಂಧಗಳ ವಿಷಯ ಬಂದಾಗ, ಕೆಲ ಶಿಷ್ಟಾಚಾರಗಳು, ಸಂಪ್ರದಾಯಗಳು ಹಾಗೂ ಒಪ್ಪಂದಗಳಿರುತ್ತವೆ. ಅವುಗಳನ್ನು ಎಲ್ಲ ದೇಶಗಳು ಪಾಲನೆ ಮಾಡುವುದು ಮುಖ್ಯ' ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries