HEALTH TIPS

ಭಕ್ತಿಯಲ್ಲಿ ಮಿಂದೆದ್ದ ಕೊಡಂಗಲ್ಲೂರ್ ಶ್ರೀ ಕೂರುಂಬಾ ಕಾವ್ ಕಾವುತಿಂದಲ್ ಉತ್ಸವ

                 ಕೊಡುಂಗಲ್ಲೂರು: ನೆರೆದಿದ್ದ ಭಕ್ತರು ಹಾಗೂ ಭಕ್ತಿಯ ಪರಾಕಾಷ್ಠೆಯ ನೂರಾರು ಜನರು ಕೊಡಂಗಲ್ಲೂರು ಶ್ರೀಕೂರುಂಬಕಾವ್ ಉತ್ಸವಕ್ಕೆ ಸಾಕ್ಷಿಯಾದರು. 

                    ದಾರಿಕನನ್ನು ನಿಗ್ರಹಿಸಿದ ಬಳಿಕ  ಅಸುರಗಣಗಳು ಎಲ್ಲವನ್ನೂ ತ್ಯಾಗಮಾಡಿ  ದೇವಿಯ ಪದತಲದಲ್ಲಿ ಸಮರ್ಪಿಸಿದ ದಿನವನ್ನು ಕಾವುತಿಂದಲ್ ಉತ್ಸವ ಎಂದು ನಂಬಲಾಗಿದೆ. ಮೊನ್ನೆ ಮಧ್ಯಾಹ್ನ 12 ಗಂಟೆಗೆ ಅಶ್ವತಿ ಪೂಜೆ ಆರಂಭವಾಯಿತು. ಗೌಪ್ಯ ವಿಧಿ ಪ್ರಕಾರ ಶಾಕ್ತೇಯ ಪೂಜೆಯ ಬಳಿಕ ಸಂಜೆ ನಾಲ್ಕು ಗಂಟೆಗೆ ಕುಂಞತ್ ಪರಮೇಶ್ವರುಣ್ಣಿ ಅಡಿಗಳು, ಮಠದ ರವೀಂದ್ರನಾಥನ್ ಹಾಗೂ ದೊಡ್ಡ ತಂಬುರಾನ್ ಕುಂಜುಣ್ಣಿರಾಜ ಮತ್ತು ಪರಿವಾರದವರು ಪೂರ್ವದ್ವಾರದ ಮೂಲಕ ಹೊರ ಬಂದರು.

                  ಶಸ್ತ್ರಸಜ್ಜಿತ ಸೈನಿಕರು ದೊಡ್ಡ ಸ್ವಾಮಿಗೆ ನಮನ ಸಲ್ಲಿಸಿದರು. ವೇದಿಕೆಯನ್ನು ತಲುಪಿದ ನಂತರ, ಮಹಾಪ್ರಭುಗಳು ಉನ್ನತ ಅಧಿಕಾರಿಗಳಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದರು. ನಂತರ ಕಾವುತಿಂದಲ್‍ಗೆ ಅನುಮತಿ ನೀಡಲಾಯಿತು. 4.20 ಕ್ಕೆ ಕೊಯಿಮಾ ಕೆಂಪು ರೇμÉ್ಮ ವಸ್ತ್ರವನ್ನು ಧರಿಸಿದ್ದರು. ಇದರೊಂದಿಗೆ ಬಲ ಮಹಡಿಗಳಲ್ಲಿ ಹಾಗೂ ದೇವಸ್ಥಾನದ ಪ್ರಾಂಗಣದಲ್ಲಿ ಕಾತರದಿಂದ  ಕಾದು ಕುಳಿತಿದ್ದ ನೂರಾರು ಮಂದಿ ಪಾಲಕ್ಕವೇಲನ್ ಜೊತೆ ಭೋಜನಗೈದರು. ಬಳಿಕ ಘಂಟಾಘೋಷ, ಗೆಜ್ಜೆಗಳ ಸದ್ದುಗಳ ವಾತಾವರಣದಲ್ಲಿ ಬಿದಿರಿನ ಕೋಲುಗಳನ್ನು ಬಡಿದು ದೇವಘೋಷಣೆಯೊಂದಿಗೆ ಕಾವುತಿಂದಲ್ ಉತ್ಸವ ನಡೆಯಿತು.

                     ಭಕ್ತರು ದೇವಸ್ಥಾನಕ್ಕೆ ಕಾಣಿಕೆಗಳನ್ನು ಸಮರ್ಪಿಸಿ ತಮ್ಮ ಎದುರಿಗಿದ್ದ ಅಡೆತಡೆಗಳನ್ನು ದೂರ ತಳ್ಳಿ ಮೂರು ಬಾರಿ ಪ್ರದಕ್ಷಿಣೆ ಹಾಕಿ ಕಾವುತಿಂದಲ್ ಪೂರೈಸಿದರು. ನಂತರ ಮಹಾಸ್ವಾಮಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ದೇವಸ್ವಂ ಮಂಡಳಿ ಅಧಿಕಾರಿಗಳು ಹಾಗೂ ಹಿರಿಯ ಪೋಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೀನಭರಣಿ ಮಹೋತ್ಸವದ ಸಮಾಪ್ತಿಯ ನಿಮಿತ್ತ ಮೊನ್ನೆ ಬೆಳಗ್ಗೆ ಪಟ್ಟಾರ್ಯ ಸಮುದಾಯದವರು ಕೂಷ್ಮಾಂಡ ಬಲಿ ನಡೆಸಿದರು. ಬೆಳಗ್ಗೆ ದೇವಿಗೆ ವರಿಯಾರಿ ಪಾನಕ ನೈವೇದ್ಯ ನಡೆಯಿತು. ಆಶ್ವತಿಯಂದು ತ್ರಿಚಂದನ ಅಲಂಕರಿಸಿ ಮುಚ್ಚಿದ್ದ ದೇವಸ್ಥಾನದ ಗರ್ಭಗೃಹ ಏ.16ರಂದು ಮತ್ತೆ ತೆರೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries