ತಿರುವನಂತಪುರಂ: ರೈಲ್ವೇ ಟಿಟಿಇ ಮೇಲೆ ಮತ್ತೊಂದು ದಾಳಿ ನಡೆದಿದೆ. ಭಿಕ್ಷುಕನಿಂದ ಟಿಟಿಇ ಜೈಸನ್ ಮುಖಕ್ಕೆ ಕಪಾಳಮೋಕ್ಷ ಮಾಡಲಾಗಿದ್ದು, ಕಣ್ಣಿಗೆ ಗಾಯವಾಗಿದೆ.
ತಿರುವನಂತಪುರಂ-ಕಣ್ಣೂರು ಜನಶತಾಬ್ದಿ ಎಕ್ಸ್ಪ್ರೆಸ್ ತಿರುವನಂತಪುರಂ ನಿಲ್ದಾಣದಿಂದ ಹೊರಟ ಕೂಡಲೇ ಈ ಘಟನೆ ನಡೆದಿದೆ. ರೈಲು ಚಲಿಸಲು ಆರಂಭಿಸಿದ ಕೂಡಲೇ ದಾಳಿ ನಡೆದಿದೆ. ದಾಳಿಯ ನಂತರ ಭಿಕ್ಷುಕ ಕಾಲ್ಕಿತ್ತಿರುವುದಾಗಿ ತಿಳಿದುಬಂದಿದೆ. ಭಿಕ್ಷುಕನನ್ನು ಹತ್ತದಂತೆ ತಡೆದಾಗ ದಾಳಿ ನಡೆದಿದೆ ಎಂದು ಟಿಟಿಇ ತಿಳಿಸಿದ್ದಾರೆ. ಅಡುಗೆ ಕೆಲಸಗಾರರನ್ನು ತಳ್ಳಿ ದುಷ್ಕರ್ಮಿ ಪರಾರಿಯಾಗಿದ್ದಾನೆ ಎಂದೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಂಗಳವಾರ ಪ್ರಯಾಣಿಕರೊಬ್ಬರ ದಾಳಿಯಲ್ಲಿ ಟಿಟಿಇ ಸಾವನ್ನಪ್ಪಿದ ಆಘಾತದಿಂದ ಕೇರಳ ಇನ್ನೂ ಚೇತರಿಸಿಕೊಂಡಿಲ್ಲ. ಇದೇ ವೇಳೆ ಮತ್ತೊಂದು ಹಿಂಸಾಚಾರದ ಘಟನೆ ವರದಿಯಾಗುತ್ತಿದೆ. ಒಡಿಶಾ ಮೂಲದ ರಜನಿಕಾಂತ್ ಎಂಬಾತ ಟಿಕೆಟ್ ಇಲ್ಲದೆ ರಿಸರ್ವೇಶನ್ ಕೋಚ್ ಹತ್ತಿದ್ದಕ್ಕಾಗಿ ಟಿಟಿಇ ಕೆ.ವಿನೋದ್ ದಂಡ ಪಾವತಿಸಲು ಕೇಳಿದಾಗ ರೈಲಿನಿಂದ ತಳ್ಳಿದಾಗ ಹೊರಗೆಸೆಯಲ್ಪಟ್ಟು ಮೃತರಾಗಿದ್ದರು.