HEALTH TIPS

ಕರುವನ್ನೂರು ಹಗರಣ: ಪಿ.ಕೆ. ಬಿಜು ಪ್ರಮುಖ ಆರೋಪಿಯಾಗುವ ಸಾಧ್ಯತೆಯತ್ತ: ಸಿಪಿಎಂ ಸಂಕಷ್ಟದಲ್ಲಿ

              ತ್ರಿಶೂರ್: ಕರುವನ್ನೂರ್ ಪ್ರಕರಣದಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಪಿ.ಕೆ. ಬಿಜು ಅವರನ್ನು ಶಂಕಿತರನ್ನಾಗಿ ಮಾಡಲು ಇಡಿ ಮುಂದಾಗಿದೆ. 

              ಕರುವನ್ನೂರು ಕೋ. ಬ್ಯಾಂಕಿನಿಂದ ಅಪಾರ ಮೊತ್ತ ಕದ್ದ ಪಿ. ಸತೀಶ್‍ಕುಮಾರ್‍ನಿಂದ ಹಣ ಪಡೆದಿರುವುದು ಸ್ಪಷ್ಟವಾದ ನಂತರ, ಬಿಜು ಆರೋಪಿಯಾಗಿದ್ದ. ಬಹುಮಾನವಾಗಿ ಬಿಜು ಸತೀಶ್ ಅವರಿಂದ ಹಣದ ಜೊತೆಗೆ ಟ್ಯಾಬ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಸಹ ಪಡೆದಿರುವರು. ಇದಲ್ಲದೇ ಬಿಜು ಎಂಬುವವರಿಗೆ ಪರ್ಲಿಕಾಡ್‍ನಲ್ಲಿ ಮನೆಯೊಂದನ್ನು ಬಾಡಿಗೆಗೆ ನೀಡಿದ್ದವರು ಸತೀಶ್ ಕುಮಾರ್. ಬಾಡಿಗೆಯನ್ನೂ ಸತೀಶ್ ಭರಿಸಿದ್ದಾರೆ.

            ಕರುವನ್ನೂರು ವಂಚನೆ ಪ್ರಕರಣದಲ್ಲಿ ಸ್ವತಃ ರಾಜ್ಯ ಸಮಿತಿ ಸದಸ್ಯರೇ ಆರೋಪಿಯಾಗಿರುವುದು ಸಿಪಿಎಂನ ಈವರೆಗೆ ಹೇಳಿದ್ದ ನಿಲುವುಗಳನ್ನು ಇನ್ನಷ್ಟು ದುರ್ಬಲಗೊಳಿಸಲಿದೆ. ಬಿಜು ಅವರಲ್ಲದೆ ರಾಜ್ಯ ಸಮಿತಿ ಸದಸ್ಯರಾದ ಎ.ಸಿ. ಮೊಯ್ತೀನ್ ಮತ್ತು ಎಂ.ಕೆ. ಕಣ್ಣನ್ ಅವರೂ ಆರೋಪಿಗಳಾಗಿದ್ದಾರೆ.

               ಇಡಿ ಮತ್ತು ಆದಾಯ ತೆರಿಗೆ ಇಲಾಖೆಯು ಜಿಲ್ಲೆಯ ಪ್ರದೇಶ-ಸ್ಥಳೀಯ ಸಮಿತಿಗಳ ಲೆಕ್ಕಪರಿಶೋಧನೆಯನ್ನು ಮುಂದುವರೆಸಿದೆ. ಇದು ಸ್ಪಷ್ಟವಾಗುತ್ತಿದ್ದಂತೆ ಇನ್ನಷ್ಟು ಸ್ಥಳೀಯ ನಾಯಕರ ಮೇಲೆ ಆರೋಪ ಹೊರಿಸುವ ಸಾಧ್ಯತೆ ಇದೆ. ಬ್ಯಾಂಕ್ ಗಳನ್ನು ಕೇಂದ್ರವಾಗಿಟ್ಟುಕೊಂಡಿರುವ ಕಪ್ಪುಹಣದ ವಹಿವಾಟಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರು ಆರೋಪಕ್ಕೆ ಗುರಿಯಾಗುವುದು ಕೂಡ ರಾಜಕೀಯವಾಗಿ ಸಿಪಿಎಂಗೆ ಹಿನ್ನಡೆಯಾಗಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries