ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯಿತಿ ಸದಸ್ಯೆ, ಸೂರಂಬೈಲ್ ನಿವಸಿ ಅನಿತಶ್ರೀ ಅವರ ಹೆಂಚುಹಸಿನ ಮನೆಗೆ ಬೆಂಕಿ ತಗುಲಿ ಸಂಪೂರ್ಣ ಉರಿದು ನಾಶಗೊಂಡಿದೆ. ಅನಿತಶ್ರೀ ಅವರು ಪುತ್ತಿಗೆ ಪಂಚಾಯಿತಿಗೆ ಹಾಗೂ ಇವರ ಪತಿ ರಾಮ ಅವರು ಕೆಲಸಕ್ಕೆ ಹೊರಗೆ ತೆರಳಿದ್ದ ಸಂದರ್ಭ ಬೆಂಕಿ ಆಕಸ್ಮಿಕ ನಡೆದಿದೆ. ದಂಪತಿ ಮಕ್ಕಳಿಬ್ಬರೂ ಮಂಗಳೂರಿನ ಕಾಲೇಜೊಂದರಲ್ಲಿಕಲಿಯುತ್ತಿದ್ದು, ಬೆಂಕಿಆಕಸ್ಮಿಕ ಸಂದರ್ಭ ಇವರಿಬ್ಬರೂ ಸ್ಥಳದಲ್ಲಿರಲಿಲ್ಲ.
ಮನೆಯೊಳಗಿಂದ ಹೊಗೆ ಕಾಣಿಸುತ್ತಿರುವುದನ್ನು ಮನಗಂಡ ಸ್ಥಳೀಯರು ನೀಡಿದ ಮಾಹಿತಿಯನ್ವಯ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ತಾಸುಗಳ ಕಾಲ ನಡೆಸಿದ ಕಾರ್ಯಾಚರನೆಯಿಂದ ಬೆಂಕಿ ಶಮನಗೊಳಿಸಿದ್ದರೂ, ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು.
ಮನೆಯೊಳಗಿದ್ದ ಪ್ರಮುಖ ದಾಖಲೆ, ಇಲೆಕ್ಟ್ರಾನಿಕ್ ಉಪಕರಣ, ಬಟ್ಟೆಬರೆ ಸಂಪೂರ್ಣ ಉರಿದು ನಾಶಗೊಂಡಿದೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಬೆಂಕಿ ಆಕಸ್ಮಿಕಕ್ಕೆ ಕಾರಣವೆಂದು ಸಂಶಯಿಸಲಾಗಿದೆ.