HEALTH TIPS

ಅರುಣಾಚಲ ಪ್ರದೇಶದಲ್ಲಿ ಮೃತರಾದ ಕೇರಳೀಯರ ಕಥೆ ವಿಚಿತ್ರದತ್ತ: ಆರ್ಯ ದ್ವಂದ್ವ ವ್ಯಕ್ತಿತ್ವ, ವಿಚಿತ್ರ ಮನಸ್ಥಿತಿ ಅಂದಾಜು

                 ತಿರುವನಂತಪುರಂ: ಅರುಣಾಚಲ ಪ್ರದೇಶದಲ್ಲಿ ಅಸ್ವಾಭಿಕವಾಗಿ ಮೃತಸ್ಥಿತಿಯಲ್ಲಿ ಪತ್ತೆಯಾದ ಕೇರಳೀಯ ವೈದ್ಯ ದಂಪತಿ ಮತ್ತು ಅವರ ಸ್ನೇಹಿತೆಯ ಸಾವಿನ ಹಿಂದೆ ಯಾವುದೇ ಪ್ರತ್ಯೇಕ ಉದ್ದೇಶವಿರಲಿಲ್ಲ ಎಂದು ಪೋಲೀಸರು ತೀರ್ಮಾನಿಸಿದ್ದಾರೆ. ಆರ್ಯ ದ್ವಂದ್ವ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ ಎಂಬ ಶಂಕೆಯೂ ವ್ಯಕ್ತವಾಗಿದೆ.

                ಮೂವರು ವ್ಯಕ್ತಿಗಳ ಇ-ಮೇಲ್ ಐಡಿಗಳು ಮತ್ತು ಮೊಬೈಲ್ ಪೋನ್ ಸಂಪರ್ಕಗಳನ್ನು ಕಂಡು ಪೋಲೀಸರು ಈ ತೀರ್ಮಾನಕ್ಕೆ ಬಂದಿದ್ದಾರೆ. ನವೀನ್ ಯಾವಾಗಲೂ ಪ್ರಪಂಚದ ಅಂತ್ಯದ ಬಗ್ಗೆ ಮಾತನಾಡುತ್ತಿದ್ದ. ಪ್ರವಾಹದ ಸಂದರ್ಭದಲ್ಲಿ ಮತ್ತು ಕೋವಿಡ್ ಸಂದರ್ಭದಲ್ಲಿ ತಾನು ಹೇಳಿದ ಮಾತಿಗೆ ಜಗತ್ತು ಬರುತ್ತಿದೆ ಎಂದು ನವೀನ್ ವಾದಿಸಲು ಪ್ರಯತ್ನಿಸಿದ್ದಾರೆ ಎಂದು ಸೂಚನೆಗಳು ಈ ತನಿಖೆಯಲ್ಲಿ ಕಂಡುಬಂದಿದೆ ಎಂದು ಪೋಲೀಸರು  ಮಾಹಿತಿ ನೀಡಿದ್ದಾರೆ.

                 ನವೀನ್ ಆರ್ಯ ಮತ್ತು ದೇವಿಯನ್ನು ಧ್ಯಾನಕ್ಕೆ ತೆರಳುವಂತೆ ಒತ್ತಾಯಿಸಿದ್ದರು. ಇದಕ್ಕಾಗಿ ಹಲವು ಬಾರಿ ಬೇರೆ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದರು. ಈ ವಿಚಾರ ಬೇರೆಯವರಿಗೆ ತಿಳಿಯದಂತೆ ಡೈರಿ ಪುಟಗಳು ಹಾಗೂ ಮೊಬೈಲ್ ಸಂದೇಶಗಳನ್ನು ನವೀನ್ ನಾಶಪಡಿಸಿದ್ದ. ಅದನ್ನು ವಶಪಡಿಸಿಕೊಂಡಾಗ, ನವೀನ್ ಆಲೋಚನೆಗಳ ಬಗ್ಗೆ ಪೋಲೀಸರಿಗೆ ಸ್ಪಷ್ಟತೆ ಲಭಿಸಿದೆ. 

                ಆರ್ಯ ಅವರದ್ದು ದ್ವಂದ್ವ ವ್ಯಕ್ತಿತ್ವ ಎಂದು ಹೇಳಲು ಕಾರಣ ಅವರ ಜತೆ ಸಂವಹನ ನಡೆಸಿದ ಡಾನ್ ಬಾಸ್ಕೋ ಅವರ ಇಮೇಲ್ ವಿಳಾಸ ಆರ್ಯ ಅವರದ್ದು. ಇದಕ್ಕೆ ಕಳುಹಿಸಿರುವ ಸಂದೇಶಗಳೂ ಆರ್ಯ ಅವರದ್ದೇ ಎಂದು ಪೋಲೀಸರು ನಂಬಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries