ಕೋಝಿಕ್ಕೋಡ್: ರಾಜ್ಯದಲ್ಲಿ ಇಂದು ಬುಧವಾರ ಮುಸ್ಲಿಂ ಸಮುದಾಯದ ರಮ್ಜಾನ್ ಮುಕ್ತಾಯದ ಕಿರು ಪೆರುನಾಳ್ ನಡೆಯಲಿದೆ. ಪೊನ್ನಾನಿಯಲ್ಲಿ ಶವ್ವಾಲ್ ಚಂದ್ರ ದರ್ಶನ ನಿನ್ನೆ ಕಂಡುಬಂದಿದ್ದರಿಂದ ಇಂದು ಪೆರುನಾಳ್ ಆಚರಣೆ ನಡೆಯಲಿದೆ ಎಂದು ಪಾಣಕ್ಕಾಡ್ ಸಾದಿಕಲಿ ಶಿಹಾಬ್ ತಂಗಳ್ ಮಾಹಿತಿ ನೀಡಿದ್ದಾರೆ.
ಕೇರಳ, ಲೇಹ್ ಹಾಗೂ ಕಾರ್ಗಿಲ್ನಲ್ಲಿ ಬುಧವಾರ ಈದ್ ಆಚರಿಸಲಾಗುತ್ತದೆ.
ಮಂಗಳವಾರ ಸಂಜೆ ಶವ್ವಾಲ್ 1ರ ಚಂದ್ರದರ್ಶನವಾಗಿದ್ದರಿಂದ ಬುಧವಾರ ಈದ್ ಆಚರಿಸಲಾಗುತ್ತದೆ ಎಂದು ಕೇರಳದ ಮುಸ್ಲಿಂ ವಿದ್ವಾಂಸರಾದ ಸಯ್ಯಿದ್ ಸಾದಿಖ್ ಅಲಿ ಶಿಹಾಬ್ ತಂಙಲ್, ಜಿಫ್ರಿ ಮುತ್ತುಕೋಯ ತಂಙಳ್, ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ.
ಚಂದ್ರ ದರ್ಶನವಾದ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಗುರುವಾರ ಈದ್ ಆಚರಿಸಲಾಗುತ್ತದೆ ಎಂದು ದೆಹಲಿಯ ಶಾಹಿ ಜಾಮಿಯ ಮಸೀದಿಯ ಮಾಜಿ ಮುಖ್ಯಸ್ಥ ಸಯ್ಯದ್ ಅಹಮದ್ ಬುಖಾರಿ ತಿಳಿಸಿದರು.
ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಬಿಹಾರದವರನ್ನೂ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಚಂದ್ರದರ್ಶನವಾದ ಯಾವುದೇ ಮಾಹಿತಿ ಇಲ್ಲ ಎಂದರು.