HEALTH TIPS

ಐಲ ಕ್ಷೇತ್ರದಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ

            ಉಪ್ಪಳ : ಇಲ್ಲಿಗೆ ಸಮೀಪದ ಐಲ ದುರ್ಗಾಪರಮೇಶ್ವರಿ ಕ್ಷೇತ್ರದ ಬಿಂಬ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಭಾನುವಾರದಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದುವು. ಈ ಸಂದರ್ಭದಲ್ಲಿ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ಸದಸ್ಯರಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಲಾವಿದರಾದ ಗುರುರಾಜ್ ಕಾಸರಗೋಡು, ಆದ್ಯಂತ್ ಅಡೂರು, ಉಷಾ ಸುಧಾಕರನ್ (ಗಾಯನ), ಸನುಷಾ ಸುನಿಲ್, ವರ್ಷಾ ಎಂ ಆರ್, ವೃಕ್ಷಾ ಎಂ ಆರ್, ಅಹನಾ ಎಸ್ ರಾವ್, ಜ್ಞಾನ ರೈ ಪುತ್ತೂರು, ವರ್ಷಾ ಶೆಟ್ಟಿ, ದೃಶ್ಯ ಸಾಲ್ಯಾನ್, ವಿಶಿಕಾ ಸಾಲ್ಯಾನ್, ಸಿಯಾ ಜೆ ಕೆ, ವೈಷ್ಣವಿ ಎಸ್ ಶೆಟ್ಟಿ, ಆಜ್ಞಾ ರೈ ಪುತ್ತೂರು, ಪೂಜಾಶ್ರೀ, ತೃಪ್ತಿ ಕೆ ಎಸ್, ಅವನಿ ಎಂ ಎಸ್, ಸನುಷಾ ಸುಧಾಕರನ್, ಅರ್ಪಿತಾ ವಿ ರೈ, ಹಂಶಿತ್ ಆಳ್ವ, ಶ್ರದ್ಧಾ ಎ  ಎಸ್, ಮೇಧಾ ಎ ಎಸ್, ಆರಾಧ್ಯ ಎಸ್ ಆಳ್ವ, ಆದ್ಯ, ಆರಾಧ್ಯ, ಇಶಾನ್, ಹೃತಿಕ, ಕೌಶಿಕ, ಮಧುಲತಾ ಪುತ್ತೂರು, ರೇಶ್ಮಿಪ್ರಭಾ, ಕೀರ್ತಿಪ್ರಭಾ, ಭಾನ್ವಿ ಕುಲಾಲ್, ಕೃಪೇಶ್ ಎಂ ಆರ್ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಪ್ರಸ್ತುತಿ ಹಾಗೂ ನಿರೂಪಣೆಯನ್ನು ಡಾ.ವಾಣಿಶ್ರೀ ಕಾಸರಗೋಡು ನಿರ್ವಹಿಸಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತ ವಿರಾಜ್ ಅಡೂರು, ರಂಗಭೂಮಿ ಕಲಾವಿದ ರವಿ ವರ್ಕಾಡಿ, ಪತ್ರಕರ್ತೆ ಹೇಮಾ ಜಯರಾಂ ಹಾಗೂ ಐಲ ಕ್ಷೇತ್ರದ ಆಡಳಿತ ಸಮಿತಿಯ ಮುಖಂಡರಾದ ಪುರುಷೋತ್ತಮ ಮೊದಲಾದವರು ಇದ್ದರು. ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಗೆ ನೀಡಿ ಅಭಿನಂದಿಸಲಾಯಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries