ಕಾಸರಗೋಡು: ಚುನಾವಣೆಯಲ್ಲಿ ನಕಲಿ ಮತದಾನ ನಡೆಸಿದಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ ಎಡರಂಗ ಬಚಾವ್ ಆಗದು ಎಂದು ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಶಾಸಕ ಪಿ.ಕೆ.ಕುಂಞõÁಲಿಕುಟ್ಟಿ ಹೇಳಿದ್ದಾರೆ.
ನಕಲಿ ಮತದಾನದ ಬಗ್ಗೆ ಯುಡಿಎಫ್ ಕಾರ್ಯಕರ್ತರು ಜಾಗ್ರತೆ ಪಾಲಿಸಬೇಕು. ಈ ಹಿಂದೆಯೂ ನಕಲಿ ಮತ ಚಲಾಯಿಸಲ್ಪಟ್ಟಿತ್ತು. ಆದ್ದರಿಂದ ಮತದಾನದ ದಿನದಂದು ಹೆಚ್ಚಿನ ಗಮನ ಹರಿಸಿದಲ್ಲಿ ನಕಲಿ ಮತದಾನ ತಡೆಗಟ್ಟಬಹುದೆಂದು ಅವರು ಹೇಳಿದ್ದಾರೆ. ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಪರ ಅಣಂಗೂರಿನಲ್ಲಿ ನಡೆದ ಯುಡಿಎಫ್ ಚುನಾವಣಾ ಪ್ರಚಾರ ಸ`Éಯಲ್ಲಿ ಅವರು ಮಾತನಾಡಿದರು.