ಕಾಸರಗೋಡು: ಅಮಲುಪದಾರ್ಥ ಸೇವಿಸಿ ವಾಹನ ಚಲಾಯಿಸುವವರ ಪತ್ತೆಗಾಗಿ ಪೊಲೀಸರು ಜಿಲ್ಲೆಯ ವಿವಿಧೆಡೆ ನಡೆಸಿರುವ ವಿಶೇಷ ಕಾರ್ಯಾಚರಣೆಯಲ್ಲಿ ಶನಿವಾರ ರಾತ್ರಿ ಒಂದೇ ದಿನ 26ಮಂದಿಯನ್ನು ಬಂಧಿಸಿದ್ದಾರೆ. ಶನಿವಾರ ರಅತ್ರಿ ಆರಂಭಗೊಂಡ ಕಾರ್ಯಾಚರಣೆ ಭಾನುವಾರ ಬೆಳಗಿನ ವರೆಗೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ 30 ಬೈಕ್ ಸೇರಿದಂತೆ 60ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ ಸಾರ್ವಜನಿಕ ಸಥಳದಲ್ಲಿ ಮದ್ಯ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮದ್ಯ ಸೇವಿಸಿ ವಾಹನ ಚಲಾವಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ಠಾಣೆಯಲ್ಲಿ ತಲಾ ನಾಲ್ಕು, ಬೇಡಡ್ಕ, ಬೇಕಲ ಠಾಣೆಯಲ್ಲಿ ತಲಾ ಮೂರು, ಚಂದೇರ, ಕುಂಬಳೆ, ಬದಿಯಡ್ಕ ಠಾಣೆಯಲ್ಲಿ ತಲಾ ಎರಡು, ಚಿತ್ತಾರಿಕಲ್, ಚಈಮೇನಿ, ರಾಜಾಪುರಂ, ಹೊಸದುರ್ಗ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ತಿಳಿಸಿದ್ದಾರೆ.