ನವದೆಹಲಿ/ ರಾಂಚಿ (PTI): ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಇತರರ ವಿರುದ್ಧ ದಾಖಲಾಗಿರುವ ಜಮೀನು ಕಬಳಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ ಜಾರಿ ನಿರ್ದೇಶನಾಲಯವು (ಇ.ಡಿ) ಶನಿವಾರ ತಿಳಿಸಿದೆ.
0
samarasasudhi
ಮೇ 12, 2024
ನವದೆಹಲಿ/ ರಾಂಚಿ (PTI): ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಇತರರ ವಿರುದ್ಧ ದಾಖಲಾಗಿರುವ ಜಮೀನು ಕಬಳಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ ಜಾರಿ ನಿರ್ದೇಶನಾಲಯವು (ಇ.ಡಿ) ಶನಿವಾರ ತಿಳಿಸಿದೆ.
ಆರೋಪಿಗಳಾದ ಸಂಜೀತ್ ಕುಮಾರ್, ಎಂ.ಡಿ.ಇಶಾದ್ ಮತ್ತು ತಪಸ್ ಘೋಷ್ ಎಂಬುವರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಬಂಧಿಸಲಾಗಿದೆ. ಛೋಟ ನಾಗ್ಪುರ ಟೆನನ್ಸಿ ಕಾಯ್ದೆ (ಸಿಎನ್ಟಿ ಕಾಯ್ದೆ) ಅಡಿ ಮಾರಾಟಕ್ಕೆ ಅವಕಾಶವಿಲ್ಲದ ಜಮೀನುಗಳ ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ, ನಕಲು ಮಾಡುವಲ್ಲಿ ಪಾತ್ರರಾಗಿದ್ದಾರೆ ಎಂಬ ಕಾರಣಕ್ಕೆ ಬಂಧಿಸಲಾಗಿದೆ ಎಂದು ಇ.ಡಿ ತಿಳಿಸಿದೆ.