HEALTH TIPS

ಡಾ.ವಂದನಾ ದಾಸ್ ಕೊಲೆಯಾಗಿ ಆಯಿತೊಂದು ವರ್ಷ:ನ್ಯಾಯಕ್ಕಾಗಿ ಕಾಯುತ್ತಿರುವ ಹೆತ್ತವರು

              ಕೊಟ್ಟಾಯಂ: ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕೊಟ್ಟಾಯಂ ಮುಟ್ಟುಚಿರ ಹೌಸ್ ಸರ್ಜನ್  ಡಾ.ವಂದನಾ ದಾಸ್ ಹತ್ಯೆಯಾಗಿ ಮೇ 10ಕ್ಕೆ ಒಂದು ವರ್ಷ ತುಂಬಲಿದೆ.

              ವೈದ್ಯಕೀಯ ಪರೀಕ್ಷೆಗೆಂದು ಪೋಲೀಸರು ಕರೆತಂದ ಕ್ರಿಮಿನಲ್ ಆಕೆಗೆ ಇರಿದು ಮೃತಪಟ್ಟಿದ್ದರು. ಪೋಲೀಸರು ಮತ್ತು ಸಹೋದ್ಯೋಗಿಗಳು ತಮ್ಮ ಭದ್ರತೆಗಾಗಿ ಓಡಿ ತಪ್ಪಿಸಿಕೊಂಡಿದ್ದು ಡಾ.ವಂದನಾ ಅಪರಾಧಿಯ ಮುಂದೆ ಅಸಹಾಯಕಳಾದಳು.

             ಕೊಲ್ಲಂನ ಪುಯಪಲ್ಲಿಯ ಶಾಲಾ ಶಿಕ್ಷಕ 42 ವರ್ಷದ ಸಂದೀಪ್ ಕೊಲೆಗೈದ ಆರೋಪಿ.  ಈ ದುರಂತ ಘಟನೆ ಕೇರಳದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿತ್ತು. ಆರೋಗ್ಯ ಕಾರ್ಯಕರ್ತರಲ್ಲಿ ಕೋಪ ಭುಗಿಲೆದ್ದಿತು.

              ಕೊಲ್ಲಂನ ಅಜೀಜಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ ಅಧ್ಯಯನ ಮಾಡಿದ ನಂತರ,ಡಾ.ವಂದನಾ  ತಮ್ಮ ಇಂಟರ್ನ್‍ಶಿಪ್‍ನ ಭಾಗವಾಗಿ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ವಂದನ ಮುತ್ತುಚಿರ ನಂಬಿಚಿರಕಾದಲ್ಲಿ ಮೋಹನ್‍ದಾಸ್ ಮತ್ತು ವಸಂತಕುಮಾರಿ ದಂಪತಿಗಳ ಪುತ್ರಿಯಾಗಿದ್ದು,  ತಮ್ಮ ಮಗಳು ಸತ್ತಿದ್ದಾಳೆ ಎಂದು ಇನ್ನೂ ಅವರು ಭಾವಿಸಿಲ್ಲ. ಅವಳ ಕೋಣೆಯಲ್ಲಿ ಅವಳ ನಗುತ್ತಿರುವ ಚಿತ್ರದೊಂದಿಗೆ, ಅವಳು ಬಳಸಿದ ಎಲ್ಲಾ ವಸ್ತುಗಳನ್ನು ಮೇಜಿನ ಮೇಲೆ ಪೇರಿಸಿಟ್ಟಿದ್ದು,  ಆ ಪೋಷಕರು ಅವಳನ್ನು ಇನ್ನೂ ಹೃದಯದಲ್ಲಿರಿಸಿ ನೆನಪಿಸುತ್ತಿದ್ದಾರೆ. ಮಗಳ ಕೊಲೆಯ ಬಗ್ಗೆ ತನಿಖೆಯ ಬೇಡಿಕೆಯನ್ನು ಹೈಕೋರ್ಟ್ ತಿರಸ್ಕರಿಸಿದ್ದರೂ, ಅವರು ಇನ್ನೂ ಶಾಶ್ವತ ಭರವಸೆಯಲ್ಲಿ ಬದುಕುತ್ತಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries