ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಮಣಿಯಂಪಾರೆ ಅಂಗನವಾಡಿ ಮಕ್ಕಳ ಪ್ರವೇಶೋತ್ಸವ ಗುರುವಾರ ಜರಗಿತು. ಕಾರ್ಯಕ್ರಮವನ್ನು ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಮುಗಿಸಿ ಶಾಲೆಗೆ ತೆರಳಲು ಸನ್ನದ್ಧರಾದ ಮಕ್ಕಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಜೆಪಿಎಚ್ ಎನ್ ಶ್ರುತಿ ಮಕ್ಕಳ ಪೋಷಕ ಆಹಾರದ ಬಗ್ಗೆ ತರಗತಿ ನೀಡಿದರು. ಮಕ್ಕಳ ರಕ್ಷಕರು ಪಾಲ್ಗೊಂಡರು. ಅಂಗನವಾಡಿ ಅಧ್ಯಾಪಕಿ ಗೀತಾ ಎಂ ಸ್ವಾಗತಿಸಿ, ವಿಜಯಲಕ್ಷ್ಮಿ ಕೆ ವಂದಿಸಿದರು.

.jpg)
