ಮಂಜೇಶ್ವರ: ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ “ಶ್ರೀರಾಮ ವನಗಮನ-ಪಾದುಕಾ ಪ್ರದಾನ” ಯಕ್ಷಗಾನ ತಾಳಮದ್ದಳೆ ಪ್ರಸ್ತುತಿಗೊಂಡಿತು.
ಹಿಮ್ಮೇಳದಲ್ಲಿ ಭಾಗವತರು ರಾಮಪ್ರಸಾದ್ ಮಯ್ಯ ಕೂಡ್ಲು, ಚೆಂಡೆಮದ್ದಳೆಯಲ್ಲಿ ರಿತೇಶ್ ಅಡ್ಕ, ಶ್ರೀಶ ನಾರಾಯಣ, ಗೌತಮ ನಾವಡ ಮಜಿಬೈಲು ಭಾಗವಹಿಸಿದ್ದು ಅರ್ಥಧಾರಿಗಳಾಗಿ ಗಣೇಶ ನಾವಡ ಮೀಯಪದವು, ರಾಜಾರಾಮ ರಾವ್ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ಗುರುರಾಜ ಹೊಳ್ಳ ಬಾಯಾರು, ಅವಿನಾಶ ಹೊಳ್ಳ ವರ್ಕಾಡಿ, ನರಸಿಂಹ ಮಯ್ಯ ಬಿ ಸಿ ರೋಡ್, ಗುರುಪ್ರಸಾದ್ ಹೊಳ್ಲ ತಿಂಬರ, ವೇಣುಗೋಪಾಲ ಮಜಿಬೈಲು, ಕು.ವಿಷ್ಣುಪ್ರಿಯ ನಾವಡ ಮಜಿಬೈಲು ಪಾಲ್ಗೊಂಡಿದ್ದರು.




.jpg)
