ನವದೆಹಲಿ: ಜೈಲಿನಲ್ಲಿರುವ ಸಿಖ್ ಧರ್ಮ ಪ್ರಚಾರಕ ಅಮೃತ್ಪಾಲ್ ಸಿಂಗ್ ಮತ್ತು ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ ರಶೀದ್ ಅವರು ಶುಕ್ರವಾರ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
0
samarasasudhi
ಜುಲೈ 06, 2024
ನವದೆಹಲಿ: ಜೈಲಿನಲ್ಲಿರುವ ಸಿಖ್ ಧರ್ಮ ಪ್ರಚಾರಕ ಅಮೃತ್ಪಾಲ್ ಸಿಂಗ್ ಮತ್ತು ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ ರಶೀದ್ ಅವರು ಶುಕ್ರವಾರ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಇವರಿಬ್ಬರಿಗೂ ಪ್ರಮಾಣ ವಚನ ಸ್ವೀಕರಿಲು ಸಂಬಂಧಿಸಿದ ನ್ಯಾಯಾಲಯಗಳು ಪೆರೋಲ್ ನೀಡಿದ್ದವು.
ಶಿಷ್ಟಾಚಾರಗಳನ್ನು ಪೂರೈಸಿದ ಬಳಿಕ ಲೋಕಸಭಾ ಸ್ವೀಕರ್ ಅವರ ಕೋಣೆಯಲ್ಲಿ ಅವರಿಬ್ಬರು ಪ್ರಮಾಣ ವಚನ ಸ್ವೀಕರಿಸಿದರು.
ಎಂಜಿನಿಯರ್ ರಶೀದ್ ಎಂದೇ ಪ್ರಸಿದ್ಧರಾಗಿರುವ ಕಾಶ್ಮೀರಿ ನಾಯಕ ರಶೀದ್ ವಿರುದ್ಧ ಭಯೋತ್ಪಾದನೆಗೆ ಹಣ ಒದಗಿಸಿದ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಎನ್ಐಎ ಪ್ರಕರಣ ದಾಖಲಿಸಿದೆ. ಸದ್ಯ ಅವರು ತಿಹಾರ್ ಜೈಲಿನಲ್ಲಿದ್ದಾರೆ.
ಖಾಲಿಸ್ತಾನ ಪರ ಒಲವುಳ್ಳ ಅಮೃತ್ಪಾಲ್ ಸಿಂಗ್ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿದ್ದರು. ಅವರನ್ನು 2023ರ ಏಪ್ರಿಲ್ನಲ್ಲಿ ಬಂಧಿಸಲಾಗಿತ್ತು.