ತಿರುವನಂತಪುರ: ದ್ವಿಚಕ್ರ ವಾಹನ ಚಲಾಯಿಸುವಾಗ ಹಿಂದೆ ಕುಳಿತವರು ಮಾತನಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಮೋಟಾರು ವಾಹನ ಇಲಾಖೆಯ ಸುತ್ತೋಲೆಗೆ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಚಾಲನೆ ವೇಳೆ ಮಾತನಾಡುವುದನ್ನು ನಿಲ್ಲಿಸುವ ಪ್ರಸ್ತಾಪವು ಪ್ರಾಯೋಗಿಕವಾಗಿಲ್ಲ ಎಂದು ಸಚಿವರು ಹೇಳಿದರು. ಕೆಲ ಅಧಿಕಾರಿಗಳ ಮನಸ್ಸಿಗೆ ಬರುವ ಸುತ್ತೋಲೆಗಳಿವು. ಸಚಿವರಾಗಿ ಗೊತ್ತಿಲ್ಲ ಎಂದು ಗಣೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇದ್ಯಾವುದೂ ಪ್ರಾಯೋಗಿಕವಲ್ಲ, ದ್ವಿಚಕ್ರ ವಾಹನದ ಹಿಂಬದಿ ಪ್ರಯಾಣಿಕರು ಹೆಲ್ಮೆಟ್ ಧರಿಸಿ ಚಾಲನೆ ಮಾಡುವವ ಗಮನವನ್ನು ಬೇರೆಡೆಗೆ ಸೆಳೆದು ಅಪಘಾತಕ್ಕೆ ಕಾರಣವಾಗಬಹುದು ಎಂದು ಮೋಟಾರು ವಾಹನ ಇಲಾಖೆ ಸುತ್ತೋಲೆ ಹೊರಡಿಸಿತ್ತು.





