HEALTH TIPS

ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಲು ಆಸಕ್ತಿ ಇಲ್ಲ ಎಂಬ ಪೋಸ್ಟ್: ಅಖಿಲ್ ಮಾರಾರ್ ವಿರುದ್ಧ ಪ್ರಕರಣ

             ಕೊಚ್ಚಿ: ನಟ ಹಾಗೂ ನಿರ್ದೇಶಕ ಅಖಿಲ್ ಮರಾರ್ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿರುದ್ದ ಫೇಸ್ ಬುಕ್ ಪೋಸ್ಟ್ ಶೇರ್ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಕೊಚ್ಚಿ ಇನ್ಫೋಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

              ಪರಿಹಾರ ನಿಧಿಗೆ ಹಣ ನೀಡಲು ಆಸಕ್ತಿ ಇಲ್ಲ ಆದರೆ ದುರಂತ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವುದಾಗಿ ಅಖಿಲ್ ಮಾರಾರ್ ಫೇಸ್ ಬುಕ್ ಮೂಲಕ ಹೇಳಿಕೆ ನೀಡಿದ್ದರು. ಇದಾದ ಬಳಿಕ ಪರಿಹಾರ ನಿಧಿ ವಿರುದ್ಧ ಪೋಸ್ಟ್ ಹಾಕಿದ ಕಾರಣ ನೀಡಿ ಪ್ರಕರಣ ದಾಖಲಾಗಿದೆ.

            ಪ್ರಕರಣ ದಾಖಲಾದ ಬಳಿಕ ಫೇಸ್ ಬುಕ್ ನಲ್ಲಿ ಅಖಿನ್ ಮಾರಾರ್ ಪ್ರತಿಕ್ರಿಯಿಸಿದ್ದು, 'ಹಾಗಾದ್ರೆ ಮತ್ತೆ ಕೇಸ್,  ಮಹಾರಾಜರು ಆಳ್ವಿಕೆ ಮಾಡಲಿ' ಎಂದು ಹೇಳಿದ್ದಾರೆ. ಅವರು ನೇರವಾಗಿ ಮತ್ತು ಪರೋಕ್ಷವಾಗಿ ವಯನಾಡ್ ವಿಪತ್ತು ಸಂತ್ರಸ್ತರಿಗೆ ಸಹಾಯ ಮಾಡುವುದಾಗಿ ಹೇಳಿದರು. 

            ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ನಿನ್ನೆಯಿಂದ ರಾಜ್ಯದಲ್ಲಿ 40 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಬಿಜೆಪಿಯ ಮಾಧ್ಯಮ ವಿಭಾಗದ ಮಾಜಿ ಸಹ ಸಂಚಾಲಕ ಶ್ರೀಜಿತ್ ಪಂದಳA ವಿರುದ್ಧ ಪ್ರಕರಣ ದಾಖಲಿಸಿತ್ತು. ಇಂತಹ ಪೋಸ್ಟ್ಗಳನ್ನು ಸೃಷ್ಟಿಸಿ ಶೇರ್ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries