ಕೊಚ್ಚಿ: ಜನಸಾಮಾನ್ಯರು ಅಧಿಕಾರಿಗಳ ಮುಂದೆ ನಿಲ್ಲುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆನಪಿಸಿದ್ದಾರೆ. ಅಧಿಕಾರಿಗಳು ಇರುವುದು ಜನರ ಸೇವೆ ಮಾಡಲು ಹೊರತು ಅವರಿಗೆ ತೊಂದರೆ ಕೊಡಲು ಅಲ್ಲ ಎಂದವರು ತಿಳಿಸಿರುವರು.
ಸೇವೆಗಳಿಗೆ ಸುಲಭ ಪ್ರವೇಶವನ್ನು ಒದಗಿಸಲು ಕೆ ಸ್ಮಾರ್ಟ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಸಾರ್ವಜನಿಕರಿಗೆ ಸೇವೆ ನೀಡಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡುವ ಮೂಲಕ ಲಾಭ ಪಡೆದ ಅಧಿಕಾರಿಗಳು ಪ್ರತಿಫಲ ಅನುಭವಿಸಲಿದ್ದಾರೆ. ಕೆ ಸ್ಮಾರ್ಟ್ ಯೋಜನೆಯನ್ನು ಬುಡಮೇಲುಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕೊಚ್ಚಿಯಲ್ಲಿ ರಾಜ್ಯ ಮಟ್ಟದ ಸ್ಥಳೀಯಾಡಳಿತ ಅದಾಲತ್ ಉದ್ಘಾಟಿಸಿ ಹೇಳಿದರು.
ಅಧಿಕಾರಿಗಳ ವಿಭಾಗದ ಕಾರ್ಯವೈಖರಿಯಿಂದ ಕೇರಳದ ಮಾನ ಕಳೆದುಕೊಳ್ಳಬಾರದು. ಜನರಿಗೆ ತ್ವರಿತ ಸೇವೆಗಳನ್ನು ಒದಗಿಸುವ ಪ್ರಯತ್ನದಲ್ಲಿ ವ್ಯರ್ಥ ತಲೆ ತೂರಿಸಬೇಡಿ ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ನೆನಪಿಸಿದರು.


