ವಯನಾಡ್ : ವಯನಾಡ್ನಲ್ಲಿ ನಡೆದ ಭೀಕರ ಭೂಕುಸಿತದಿಂದಾಗಿ ಕಾಣೆಯಾದವರನ್ನು ಹುಡುಕುವ ಸಲುವಾಗಿ ಸನ್ರೈಸ್ ಕಣಿವೆಯಲ್ಲಿನ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಕ್ಷಣಾ ತಂಡವನ್ನು ಇಳಿಸಲಾಗಿದೆ.
0
samarasasudhi
ಆಗಸ್ಟ್ 07, 2024
ವಯನಾಡ್ : ವಯನಾಡ್ನಲ್ಲಿ ನಡೆದ ಭೀಕರ ಭೂಕುಸಿತದಿಂದಾಗಿ ಕಾಣೆಯಾದವರನ್ನು ಹುಡುಕುವ ಸಲುವಾಗಿ ಸನ್ರೈಸ್ ಕಣಿವೆಯಲ್ಲಿನ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಕ್ಷಣಾ ತಂಡವನ್ನು ಇಳಿಸಲಾಗಿದೆ.
'ಆರು ಯೋಧರು, ಕೇರಳದ ವಿಶೇಷ ಪೊಲೀಸ್ ಪಡೆಯ ನಾಲ್ವರು ಸಿಬ್ಬಂದಿ ಮತ್ತು ಇಬ್ಬರು ಅರಣ್ಯ ವೀಕ್ಷಕರನ್ನು ಒಳಗೊಂಡ ರಕ್ಷಣಾ ತಂಡವನ್ನು ಛಾಲಿಯರ್ ನದಿದಂಡೆಯಲ್ಲಿರುವ ಅಪಾಯಕಾರಿ ಭೂಪ್ರದೇಶದಲ್ಲಿ ಹೆಲಿಕಾಪ್ಟರ್ ಮೂಲಕ ಇಳಿಸಲಾಗಿದೆ' ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.