HEALTH TIPS

ಮಸೀದಿ ಸಮಿತಿಯ ಕೋರಿಕೆಯಂತೆ ಸ್ಮಶಾನದಲ್ಲಿನ ಮಣ್ಣು ತೆಗೆದ ಜೆಸಿಬಿ ಮಾಲಕನಿಗೆ ನಂತರ 45 ಲಕ್ಷ ದಂಡ; ಸಂಕಷ್ಟದಲ್ಲಿ ಜೆಸಿಬಿ ಮಾಲೀಕರು ಮತ್ತು ಕುಟುಂಬ

ಕಾಸರಗೋಡು: ಮುಸ್ಲಿಂ ಮಸೀದಿ ಸಮಿತಿಯ ಮನವಿಯಂತೆ ಸ್ಮಶಾನದ ಮಣ್ಣು ತೆಗೆದ ಜೆಸಿಬಿ ಮಾಲೀಕರಿಗೆ ಕಂದಾಯ ಇಲಾಖೆ 45 ಲಕ್ಷ ರೂ.ದಂಡ ವಿಧಿಸಿದೆ

ಚೆರುವತ್ತೂರಿನಲ್ಲಿ ಬಾಡಿಗೆಗೆ ವಾಸವಾಗಿರುವ ಈರೋಡ್ ನಿವಾಸಿ ತಂಕರಾಜ್ ವಿರುದ್ದ ನೀರಿನ ಟ್ಯಾಂಕ್‍ಗೆ ಮಣ್ಣು ತುಂಬಿದ ಆರೋಪ ಕೇಳಿಬಂದಿದೆ.  ಮಸೀದಿ ಸಮಿತಿ ತಂಕರಾಜವನ್ನು ಪೂರ್ಣವಾಗಿ ಇದೀಗ ಕೈಬಿಟ್ಟು ವಂಚನೆ ಎಸಗಿರುವುದು ವರದಿಯಾಗಿದೆ. ಜೊತೆಗೆ ಕಂದಾಯ ಇಲಾಖೆಯ ಕ್ರಮ ಮಸೀದಿ ಸಮಿತಿಯನ್ನು ಮೆಚ್ಚಿಸಲು ಎಂಬಂತಿದೆ. ದರಿಂದ ತಂಕರಾಜ್ ಹಾಗೂ ಕುಟುಂಬ ಆತ್ಮಹತ್ಯೆಯ ಹಾದಿ ಹಿಡಿದಿದೆ.


ಜೂನ್ 24, 2023 ರಂದು, ಮಸೀದಿ ಸಮಿತಿ ಸದಸ್ಯರು ಗಣೇಶ್ ಮುಕ್‍ನಲ್ಲಿರುವ ನಸ್ರತುಲ್ ಇಸ್ಲಾಂ ಜಮಾತ್ ಮಸೀದಿಯ ಸ್ಮಶಾನದಿಂದ ಮಣ್ಣನ್ನು ತೆಗೆಯಲು ತಂಕರಾಜ್ ಅವರನ್ನು ಕರೆಸಿದ್ದರು. ಮಣ್ಣು ತೆಗೆಯುವ ವೇಳೆ ಪೋಲೀಸರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಆಗಮಿಸಿದರು. ಇದಾದ ನಂತರ ಕಂದಾಯ ಇಲಾಖೆ ಬಂದು 12 ಲಕ್ಷ ರೂ.ದಂಡ ವಿಧಿಸಿತು. ಜೂನ್ 14, 2024 ರಂದು, ದಂಡವನ್ನು 45 ಲಕ್ಷಕ್ಕೆ ಹೆಚ್ಚಿಸಲಾಯಿತು. ಕೊನೆಗೆ ಜ.27ರಂದು ದಂಡ ಪಾವತಿಸದ ಕಾರಣ ಜಿಲ್ಲಾಡಳಿತ ಜೆಸಿಬಿಯನ್ನು ಸರ್ಕಾರ ಜಪ್ತಿ ಮಾಡಿತ್ತು. ಮಸೀದಿ ಕಮಿಟಿ ಸದಸ್ಯರು ಮೋಸ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಕೆಲಸಕ್ಕೆ ಕರೆದಿಲ್ಲ ಎಂದು ಮಸೀದಿ ಕಮಿಟಿ ಸದಸ್ಯರು ಕೈಬಿಟ್ಟರು ಎಂದು ತಂಕರಾಜ್ ತಿಳಿಸಿದರು. ತನ್ನನ್ನುಇ ಕರೆಯದೆ ಜೆಸಿಬಿ ಹಿಡಿದು ಸ್ಮಶಾನಕ್ಕೆ ಹೋಗುವಂತಿಲ್ಲ. 37 ಲಕ್ಷ ಸಾಲ ಮಾಡಿ ಜೆಸಿಬಿ ಖರೀದಿಸಲಾಗಿದೆ. 18 ತಿಂಗಳಿಂದ ಚಂದೇರಾ ಪೋಲೀಸ್ ಠಾಣೆ ಆವರಣದಲ್ಲಿ ತುಕ್ಕು ಹಿಡಿದು ಕೊಳೆಯುತ್ತಿದೆ. ಆತ್ಮಹತ್ಯೆಯ ಹಾದಿ ಹಿಡಿದಿದ್ದೇನೆ ಎಂದು ತಂಕರಾಜ್ ಹತಾಶೆಯಿಂದ ಹೇಳುತ್ತಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries