HEALTH TIPS

ಮೇಜಿನ ಮೇಲೆ ಕಾಲಿಟ್ಟಿದ್ದನ್ನು ಪ್ರಶ್ನಿಸಿ 7ನೇ ತರಗತಿ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ಶಿಕ್ಷಕನ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಕೊಚ್ಚಿ: 7ನೇ ತರಗತಿ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕನ ವಿರುದ್ಧದ ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ.

ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರುವ ಭಯದಲ್ಲಿ ಶಿಕ್ಷಕರು ತರಗತಿಗೆ ತೆರಳಬೇಕಾದ  ಪರಿಸ್ಥಿತಿ ಇದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮಗುವಿಗೆ ಗಾಯವಾಗಿಲ್ಲ. ಇನ್ನು, ತ್ರಿಶೂರ್ ವತನಪಲ್ಲಿ ಪೋಲೀಸರು ಶಿಕ್ಷಕನ ವಿರುದ್ಧ ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದು ನ್ಯಾಯಯುತವಲ್ಲವೆಂದು ಕೋರ್ಟ್ ಹೇಳಿದೆ. 

ಮಗುವಿಗೆ ತೊಂದರೆಯಾಗುವುದು ಶಿಕ್ಷಕರಿಗೆ ಇಷ್ಟವಿರಲಿಲ್ಲ, ಆದರೆ, ಮಾಡಿದ ತಪ್ಪಿಗೆ ಶಿಕ್ಷಿಸುವುದು ಅವರ ಕರ್ತವ್ಯವಾಗಿತ್ತೆಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಗುರುದಕ್ಷಿಣೆ ಕೇಳಿ ತನ್ನ ಹೆಬ್ಬೆರಳು ಕತ್ತರಿಸಿದ ಏಕಲವ್ಯನಿಗೆ ಮರುಮಾತಿಲ್ಲದೆ ಹೇಳಿಕೊಟ್ಟ ಪಾಠ ಈಗ ತಲೆಕೆಳಗಾಗಿದೆ ಎಂದು ಕೋರ್ಟ್ ಹೇಳಿದೆ.

ಮಕ್ಕಳ ಒಳಿತಿಗಾಗಿ ಶಿಕ್ಷಕರು ಕೈಗೊಳ್ಳುವ ಶಿಸ್ತು ಕ್ರಮಗಳನ್ನು ಅಪರಾಧಗಳೆಂದು ಬಿಂಬಿಸಲಾಗುತ್ತದೆ. ಇದು ಶಾಲೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಹೊಸ ತಲೆಮಾರಿಗೆ ಶಿಸ್ತು ಕಲಿಸುವುದು ಹೇಗೆ ಎಂದು ಕೋರ್ಟ್ ಹೇಳಿದೆ.

ಚಾವಕ್ಕಾಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪರಿಗಣನೆಯಲ್ಲಿರುವ ಪ್ರಕರಣದ ಮುಂದಿನ ಪ್ರಕ್ರಿಯೆಗಳನ್ನು ಅನುಸರಿಸಿ ನ್ಯಾಯಮೂರ್ತಿ ಎ. ಬದ್ರುದ್ದೀನ್ ರದ್ದುಗೊಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries