ಕೊಲ್ಲಂ: ಗುರುವಾಯೂರು ದೇವಸ್ಥಾನದಲ್ಲಿ ಏಕಾದಶಿಯಂದು ನಡೆಸಲಾಗುತ್ತಿರುವ ಉದಯಾಸ್ತಮಾನ ಪೂಜೆಯನ್ನು ಬದಲಾಯಿಸುವ ದೇವಸ್ವಂ ಮಂಡಳಿಯ ಕ್ರಮವನ್ನು ಕೈಬಿಡಲು ಭಾರತೀಯ ಜ್ಯೋತಿಷ ವಿಚಾರ ಸಂಘ ಒತ್ತಾಯಿಸಿದೆ. ಆಚರಣೆಗಳು ಆಚರಣೆಗಳಾಗಿಯೇ ಇರಬೇಕು. ಉಲ್ಲಂಘಿಸಬಾರದು. ತುಳಸಿ ಎಲೆ ಬೇಡ, ಆನೆಗೆ ಗಂಧ,ಕುಂಕುಮ ತಿಲಕ ಹಾಕಬಾರದು ಎಂಬ ದೇವಸ್ವಂ ಮಂಡಳಿಯ ಶಿಫಾರಸ್ಸುಗಳ ಹಿಂದೆ ಮಹಾಕ್ಷೇತ್ರವನ್ನು ವಿವಾದಗಳ ಕೇಂದ್ರವನ್ನಾಗಿಸುವ ಪ್ರಯತ್ನವಿದೆ.
ಕೋಟ್ಯಂತರ ಗುರುವಾಯೂರಪ್ಪ ಭಕ್ತರ ನಂಬಿಕೆಯನ್ನು ಘಾಸಿಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜ್ಯೋತಿಷ ವಿಚಾರ ಸಂಘದ ರಾಜ್ಯಾಧ್ಯಕ್ಷ ಕುಜುಪಲ್ಲಿ ಎನ್. ಕೆ. ನಂಬೂದಿರಿ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಕುಮಾರ್ ಪೆರಿನಾಥ್ ಹೇಳಿದ್ದಾರೆ.




