HEALTH TIPS

ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರಿಗೆ ಶ್ರದ್ಧಾಂಜಲಿ

ಬದಿಯಡ್ಕ: ಇತ್ತೀಚೆಗೆ ಅಗಲಿದ ವೇದ ವಿದ್ವಾಂಸ ಪಳ್ಳತ್ತಡ್ಕ ಪರಮೇಶ್ವರ ಭಟ್ಟರಿಗೆ ಶ್ರದ್ಧಾಂಜಲಿ ಸಭೆ ಬದಿಯಡ್ಕ ಬೋಳುಕಟ್ಟೆ ಸಮೀಪ ಪಶುವೈದ್ಯ ಡಾ. ವೈ.ವಿ.ಕೃಷ್ಣಮೂರ್ತಿಯವರ ಶಿವಸದನದಲ್ಲಿ ಜರಗಿತು.

ಮುಳ್ಳೇರಿಯ ಹವ್ಯಕ ಮಂಡಲದ ಪಳ್ಳತ್ತಡ್ಕ ವಲಯದ ನೇತೃತ್ವದಲ್ಲಿ ಜರಗಿದ 257 ನೇ ಸಾಮೂಹಿಕ ಪ್ರತಿ ರುದ್ರ ಪಾರಾಯಣದ ನಂತರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವಿದ್ವತ್ಪೂರ್ಣ ಪ್ರವಚನ, ಸಾಮೂಹಿಕ ಪೂಜೆ ಪುನಸ್ಕಾರಗಳು ಹಾಗೂ ಪುತ್ರಕಾಮೇಷ್ಠಿಯಂತಹ ವಿಶೇಷ ಯಜ್ಞಯಾಗಾದಿಗಳನ್ನು ನೇತೃತ್ವ ವಹಿಸಿದ ಶ್ರೇಷ್ಠ ವ್ಯಕ್ತಿತ್ವ ಅವರದ್ದು ಎಂಬುದಾಗಿ ಶ್ರದ್ಧಾಂಜಲಿ ಸಭೆ ಅಭಿಪ್ರಾಯಪಟ್ಟಿತು. 2014 ರಿಂದ ನಿರಂತರವಾಗಿ ಪ್ರದೋಷ ಕಾಲದಲ್ಲಿ ಪ್ರತಿ ತಿಂಗಳು ನಡೆದು ಬರುತ್ತಿದೆ. ಪ್ರತಿಯೊಬ್ಬರು ರುದ್ರಾಧ್ಯಾಯಿಗಳಾಗಬೇಕು ಎನ್ನುವ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅನುಗ್ರಹದ ಗುರಿಯೊಂದಿಗೇ 257 ನೇ ಪ್ರತಿ ರುದ್ರವು ಶಿವಸನದಲ್ಲಿ ಸಂಪನ್ನಗೊಂಡಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries