HEALTH TIPS

ಕುಲಾಲ ಆಸರೆಯ ಪ್ರಥಮ ಕುಲಾಲ ಸಹಾಯ ಹಸ್ತ ಯೋಜನೆಗೆ ಚಾಲನೆ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ಆಶ್ರಯದಲ್ಲಿ ಸಹೃದಯ ಕುಲಾಲ ಬಂಧುಗಳ/ದಾನಿಗಳ ಸಹಕಾರದಿಂದ "ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ" ಸಮಾಜ ಕಾರ್ಯ ಯೋಜನೆಯನ್ವಯ ಸಂಕಷ್ಟದಲ್ಲಿರುವ ಆಶಕ್ತ ಕುಲಾಲ ಕುಟುಂಬಕ್ಕಾಗಿ "ಕುಲಾಲ ಆಸರೆ"ಯ ಪ್ರಥಮ ಕುಲಾಲ ಸಹಾಯ ಹಸ್ತ ಯೋಜನೆ ರೂ.30,000 ಮೊತ್ತವನ್ನು ಇತ್ತೀಚಿಗೆ ವಿಷದ ಹಾವಿನ ಕಡಿತಕ್ಕೊಳಗಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಮೀಂಜ ಪಂಚಾಯತಿ ಕುಲಾಲ ಶಾಖೆಗೊಳಪಟ್ಟ ಪಳ್ಳತಡ್ಕ ನಿವಾಸಿ ದಿ. ಅಶೋಕ್ ಪ್ರಮೀಳ ಕುಟುಂಬಕ್ಕೆ  ಇತ್ತೀಚೆಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ. ರವೀಂದ್ರ ಮುನ್ನಿಪ್ಪಾಡಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು,ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸುಧೀರ್ ರಂಜನ್ ಕೆ. ದೈಗೋಳಿ, ಮೀoಜ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಹೇಮಲತ, ವರ್ಕಾಡಿ ಪಂಚಾಯತಿ ಕುಲಾಲ ಶಾಖೆಯ ಅಧ್ಯಕ್ಷ  ಕೇಶವ ಕೊಡ್ಲಮೊಗರು, ಸುಧಾಕರ ಮೊರತ್ತಣೆ ಉಪಸ್ಥಿತರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries