ನವದೆಹಲಿ: ಅಪಾಯಕಾರಿ ಕೃಷಿ ತ್ಯಾಜ ಸುಡುವ ಪರಿಣಾಮ ಉತ್ತರ ಭಾರತ ವೈದ್ಯಕೀಯ ತುರ್ತು ಸ್ಥಿತಿ ಎದುರಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಹೇಳಿದ್ದಾರೆ.
0
samarasasudhi
ನವೆಂಬರ್ 19, 2024
ನವದೆಹಲಿ: ಅಪಾಯಕಾರಿ ಕೃಷಿ ತ್ಯಾಜ ಸುಡುವ ಪರಿಣಾಮ ಉತ್ತರ ಭಾರತ ವೈದ್ಯಕೀಯ ತುರ್ತು ಸ್ಥಿತಿ ಎದುರಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಹೇಳಿದ್ದಾರೆ.
ಇದೇ ವೇಳೆ ಎಎಪಿ ಆಡಳಿತವಿರುವ ಪಂಜಾಬ್ ಅನ್ನು ಶ್ಲಾಘಿಸಿದ ಅವರು, ಪಂಜಾಬ್ನಲ್ಲಿ ಕೃಷಿ ತ್ಯಾಜ್ಯ ಸುಡುವ ಪ್ರವೃತ್ತಿ ಕಡಿಮೆಯಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಏರಿಕೆಯಾಗಿವೆ ಎಂದರು.
ದೆಹಲಿಯಲ್ಲಿ ಗಾಳಿ ಗುಣಮಟ್ಟ ಕಳಪೆಯಾಗಿದೆ. ಇದರಿಂದಾಗಿ ವಯೋವೃದ್ಧರು ಆಸ್ಪತ್ರೆ ಸೇರುತ್ತಿದ್ದಾರೆ, ಪುಟ್ಟ ಮಕ್ಕಳಿಗೆ ಉಸಿರಾಡಲು ಇನ್ಹೇಲರ್ ಮತ್ತು ಸ್ಟಿರಾಯ್ಡ್ ಬೇಕಾಗಿದೆ. ಈಗಾಗಲೆ ಟ್ರಕ್ ಪ್ರವೇಶ ನಿಷೇಧ, ಕಾಮಗಾರಿಗಳ ಸ್ಥಗಿತ ಸೇರಿದಂತೆ ಹಲವು ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.