ಕೊಚ್ಚಿ: ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ವಾರ್ಷಿಕ 400 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ತಪ್ಪು ಎಂಬುದು ಸಾಬೀತಾಗಿದೆ.
ಎಸ್ಡಿಆರ್ಎಫ್ನಿಂದ ಪಡೆದ ಮತ್ತು ಖರ್ಚು ಮಾಡಿದ ಮೊತ್ತವನ್ನು ಸ್ಪಷ್ಟಪಡಿಸಲು ಹೈಕೋರ್ಟ್ ಸರ್ಕಾರವನ್ನು ಕೇಳಿರುವುದರಿಂದ ಈ ಶೋಧನೆಯು ಬಹಳ ಮಹತ್ವದ್ದಾಗಿದೆ.ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ಎಸ್ಡಿಆರ್ಎಫ್ (ರಾಜ್ಯ ವಿಪತ್ತು ಪರಿಹಾರ ನಿಧಿ)ಯಲ್ಲಿನ ಮೊತ್ತವು ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ 400 ಕೋಟಿ ರೂ. ನೀಡಿರುವ ಹೇಳಿಕೆ ಬೂಟಾಟಿಕೆಯದ್ದೆಂದು ಸಾಬೀತಾಗಿದೆ.
ಕೊಚ್ಚಿ ಮೂಲದವರಾದ ಮಾಹಿತಿ ಹಕ್ಕು ಕಾರ್ಯಕರ್ತ ಕೆ. ಗೋವಿಂದನ್ ನಂಬೂದಿರಿ ಅವರು ಕೇಳಿದ ಪ್ರಶ್ನೆಗಳಿಂದ ನ್ಯೆಜ ಅಂಕಿಅಂಶ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ, ರಾಜ್ಯ ಸರ್ಕಾರವು ವಿಪತ್ತುಗಳ ನಿಖರ ಅಂಶಗಳಿಗೆ ಅನುಗುಣವಾಗಿ SDRF ಮೊತ್ತವನ್ನು ಖರ್ಚು ಮಾಡಬೇಕಾದುದು ಕ್ರಮ.
2023-24ರಲ್ಲಿ ರಾಜ್ಯ ಸರಕಾರ ಕೇವಲ 166.28 ಕೋಟಿ ರೂ. 2016-17ರಲ್ಲಿ 146.87 ಕೋಟಿ ರೂ. 2017-18ರಲ್ಲಿ 199.51 ಕೋಟಿ ಖರ್ಚು ಮಾಡಲಾಗಿದೆ ಎಂದು ಕೊಚ್ಚಿಯ ಆರ್ಟಿಐ ಕಾರ್ಯಕರ್ತ ಗೋವಿಂದನ್ ನಂಬೂದಿರಿ ಅವರು ಕೇಳಿದ ಮಾಹಿತಿಗೆ ಉತ್ತರ ದೊರಕಿರುವುದಾಗಿ ತಿಳಿಸಿದ್ದಾರೆ. ಅಧಿಕೃತ ದಾಖಲೆಗಳ ಪ್ರಕಾರ ಈ ವರದಿ ನೀಡಲಾಗಿದೆ.
ಹೀಗಾಗಿ, ಎಸ್ಡಿಆರ್ಎಫ್ನಿಂದ ವಾರ್ಷಿಕ 400 ಕೋಟಿ ಖರ್ಚು ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಎಂದು ಸಾಬೀತಾಗಿದೆ. SDRF ನಲ್ಲಿ ಎಷ್ಟು ಹಣವಿದೆ ಮತ್ತು ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ. ಎಂಬಿತ್ಯಾದಿ ಮಾಹಿತಿಯನ್ನು ಮುಖ್ಯಮಂತ್ರಿಗಳು ನ್ಯೆಜ ಪ್ರಚಾರ ಮಾಡಬೇಕಾದ ಅಗತ್ಯವನ್ನು ಇದು ಎತ್ತಿ ತೋರಿಸುತ್ತದೆ. 2018 ಮತ್ತು 2019 ರಲ್ಲಿ, ಸರ್ಕಾರವು ಹೆಚ್ಚಿನ ಹಣವನ್ನು ಖರ್ಚು ಮಾಡಿದೆ (ಮಹಾ ಪ್ರವಾಹದ ಸಮಯದಲ್ಲಿ ಮತ್ತು ಕೋವಿಡ್ ಕಾಲ)

