ತಿರುವನಂತಪುರಂ: ಸಮುದ್ರದಿಂದ ಮರಳು ಸಂಗ್ರಹಿಸಲು ಬಂದರೆ ಕ್ರೀಯಾತ್ಮಕವಾಗಿ ಎದುರಿಸುತ್ತೇವೆ ಎಂದು ಮೀನುಗಾರರ ಸಮನ್ವಯ ಸಮಿತಿ ಹೇಳಿದೆ. ಕಡಲು ಮರಳು ಗಣಿಗಾರಿಕೆ ಯೋಜನೆ ವಿರೋಧಿಸಿ ಆಂದೋಲನ ಹಮ್ಮಿಕೊಳ್ಳುವುದಾಗಿ ಅದು ಘೋಷಿಸಿದೆ. ಇದರ ಭಾಗವಾಗಿ ಇದೇ 27ರಂದು ಕೇರಳದಲ್ಲಿ ಕರಾವಳಿ ಹರತಾಳ ನಡೆಯಲಿದೆ. 17 ರಂದು ಕೊಲ್ಲಂನಲ್ಲಿ ಮುಷ್ಕರ ಘೋಷಣೆ ಸಮಾವೇಶ ಮತ್ತು ಮಾರ್ಚ್ 5 ರಂದು ಮೆರವಣಿಗೆ ನಡೆಯಲಿದೆ. ಕಡಲಾಚೆಯ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಲಾಗಿದೆ.
ಹರತಾಳದಲ್ಲಿ ಮೀನುಗಾರರೊಂದಿಗೆ, ವಿತರಕರು ಮತ್ತು ಮಾರುಕಟ್ಟೆಗಳು ಭಾಗವಹಿಸಲಿವೆ. ಕೇರಳ ಕರಾವಳಿಯಿಂದ 575 ಮಿಲಿಯನ್ ಟನ್ ಬಿಳಿ ಮರಳನ್ನು ತೆಗೆಯಲು ಕೇಂದ್ರ ಮುಂದಾಗಿದೆ ಎಂಬ ಸುದ್ದಿಯ ನಂತರ ಮುಷ್ಕರದ ಘೋಷಣೆಯಾಗಿದೆ.
27ರಂದು ಕೇರಳದಲ್ಲಿ ಕರಾವಳಿ ಹರತಾಳ: ಸಮುದ್ರ ಮರಳು ಸಂಗ್ರಹಿಸಲು ಬಂದರೆ ಕ್ರೀಯತ್ಮಕ ಾ ಎದುರಿಸುವಿಕೆ- ಮೀನುಗಾರರ ಸಮನ್ವಯ ಸಮಿತಿ
0
ಜನವರಿ 31, 2025
Tags




