HEALTH TIPS

ಕ್ರೀಡಾಕೂಟದಿಂದ ಎರಡು ಶಾಲೆಗಳ ಮೇಲೆ ಹೇರಲಾಗಿದ್ದ ನಿಷೇಧ ರದ್ದು, ವಿದ್ಯಾರ್ಥಿಗಳ ಭವಿಷ್ಯ ಪರಿಗಣಿಸಿ ನಿರ್ಧಾರ- ಸಚಿವ

ತಿರುವನಂತಪುರಂ: ಕ್ರೀಡಾಕೂಟದಿಂದ ಎರಡು ಶಾಲೆಗಳ ಮೇಲಿನ ನಿಷೇಧವನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ನವಮುಕುಂದ ಮತ್ತು ಮಾರ್ ಬೇಸಿಲ್ ಶಾಲೆಗಳ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ತೆಗೆದುಹಾಕಲಾಗುತ್ತಿದೆ.

ಕಳೆದ ಶಾಲಾ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ವಿರೋಧಿಸಿದ ನಂತರ ಈ ಶಾಲೆಗಳು ಮುಂದಿನ ಕ್ರೀಡಾಕೂಟದಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಯಿತು. ಶಾಲೆಗಳು ಕಳುಹಿಸಿದ ವಿಷಾದ ಪತ್ರವನ್ನು ಸ್ವೀಕರಿಸಿದ ನಂತರ ನಿಷೇಧ ತೆಗೆದುಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಶಿವನ್‍ಕುಟ್ಟಿ ವಿಧಾನಸಭೆಗೆ ತಿಳಿಸಿದರು. ಆದಾಗ್ಯೂ, ಶಾಸಕ ಆಂಟನಿ ಜಾನ್ ಎತ್ತಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿಭಟನಾ ನಿರತ ಶಿಕ್ಷಕರ ವಿರುದ್ಧ ಕ್ರಮ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳ ಭವಿಷ್ಯವನ್ನು ಪರಿಗಣಿಸಿ ನಿಷೇಧ  ತೆಗೆದುಹಾಕಲಾಗುತ್ತಿದೆ. ಮಲಪ್ಪುರಂ ಜಿಲ್ಲೆಯ ನವಮುಕುಂದ ಶಾಲೆ ಮತ್ತು ಎರ್ನಾಕುಳಂ ಜಿಲ್ಲೆಯ ಕೋತಮಂಗಲಂ ಮಾರ್ಬಾಸೆಲ್ ಶಾಲೆಯ ಅಧಿಕಾರಿಗಳು ಒಲಿಂಪಿಕ್ ಶೈಲಿಯ ರಾಜ್ಯ ಶಾಲೆಯ ಸಮಾರೋಪ ಸಮಾರಂಭದಲ್ಲಿ ಸಂಭವಿಸಿದ ಅಹಿತಕರ ಘಟನೆಗಳ ಬಗ್ಗೆ ವಿμÁದ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ನವೆಂಬರ್ 8 ರಿಂದ 11 ರವರೆಗೆ ಎರ್ನಾಕುಳಂನಲ್ಲಿ ಕ್ರೀಡಾ ಉತ್ಸವ ನಡೆದಿತ್ತು.  ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ವಿ ಶಿವನ್‍ಕುಟ್ಟಿ ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries