ತಿರುವನಂತಪುರಂ: ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಕೇರಳದಲ್ಲಿ ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿದೆ. ಆಯೋಗದ ಅಧ್ಯಕ್ಷ ಕಿಶೋರ್ ಮಾಕ್ ವಾನಾ, ಸದಸ್ಯರಾದ ಲವ್ ಕುಶ್ ಕುಮಾರ್ ಮತ್ತು ವಾಟೆಪಲ್ಲಿ ರಾಮಚಂದರ್ ತಂಡದಲ್ಲಿದ್ದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂದುಳಿದ ಕಲ್ಯಾಣ ಇಲಾಖೆ ಸಚಿವ ಒ.ಆರ್.ಕೇಳು ಅವರ ಸಮ್ಮುಖದಲ್ಲಿ ವಿವಂತ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಆಯೋಗವು ಕೇರಳದ ವಿವಿಧ ಯೋಜನೆಗಳ ಪ್ರಗತಿ ಮತ್ತು ಕಾರ್ಯಗಳನ್ನು ಮೌಲ್ಯಮಾಪನ ಮಾಡಿದೆ. ಶಾಸಕರಾದ ಎ.ರಾಜಾ, ಪಿ.ಪಿ.ಸುಮೋದ್, ಓ.ಎಸ್.ಅಂಬಿಕಾ, ಕೆ.ಶಾಂತಕುಮಾರಿ ಕೆ.ಎಂ.ಸಚಿಂದೇವ್, ಮುಖ್ಯ ಕಾರ್ಯದರ್ಶಿ ಶಾರದ ಮುರಳೀಧರನ್, ಡಿಜಿಪಿ ಶೇಖ್ ದರ್ವೇಶ್ ಸಾಹಿಬ್, ಮಾಜಿ ಎಂಪಿಕೆ ಸೋಮಪ್ರಸಾದ್ ಹಾಗೂ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.





