ಮಂಜೇಶ್ವರ: ಶ್ರೀ ಅರಸುಸಂಕಲ ದೈವಕ್ಷೇತ್ರ ಸಂತಡ್ಕದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಇತ್ತೀಚೆಗೆ ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಯಕ್ಷಗಾನ ತಾಳಮದ್ದಳೆ ಗಂಗಾ ಸಾರಥ್ಯ ಪ್ರಸ್ತುತಿಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ಬಾಲಕೃಷ್ಣ ಆಚೆಗೋಳಿ, ಪೃಥ್ವಿಚಂದ್ರ ಪೆರುವೋಡಿ ಭಾಗವಹಿಸಿದ್ದರು. ಅರ್ಥಧಾರಿಗಳಾಗಿ ರಾಜಾರಾಮ ರಾವ್ ಮೀಯಪದವು, ವೇ|ಮೂ| ಗಣೇಶ ನಾವಡ ಮೀಯಪದವು, ಗುರುರಾಜ ಹೊಳ್ಳ ಬಾಯಾರು, ಯೋಗೀಶ ರಾವ್ ಚಿಗುರುಪಾದೆ ಪಾತ್ರ ಪ್ರಸ್ತುತಿ ಗೊಳಿಸಿದರು.




.jpg)
