ಕೊಟ್ಟಾಯಂ: ಸುದ್ದಿ ವಾಹಿನಿ ಚರ್ಚೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ ಬಿ.ಜೆ. ಪಿ ನಾಯಕ ಹಾಗೂ ಮಾಜಿ ಎಂ. ಎಲ್.ಎ. ಪಿ.ಸಿ.ಜಾರ್ಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿನ್ನೆ ಮೂರನೇ ಬಾರಿಗೆ ಮುಂದೂಡಲಾಯಿತು.
ಜಾರ್ಜ್ ವಿರುದ್ಧ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಹೇಳಿಕೆಗಳ ಜಾಮೀನು ರಹಿತ ನಿಬಂಧನೆಗಳ ಅಡಿಯಲ್ಲಿ ಈರಾಟುಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಜಾರ್ಜ್ ಸಾಮಾಜಿಕ ಜಾಲತಾಣಗಳ ಮೂಲಕ ವಿಷಾದ ವ್ಯಕ್ತಪಡಿಸಿದರಾದರೂ ಪ್ರಕರಣ ಕೊಟ್ಟಾಯಂ ಸೆಷನ್ಸ್ ಕೋರ್ಟ್ ಲ್ಲಿ ದಾಖಲಿಸಲಾಯಿತು.
ಮಾಧ್ಯಮಗಳ ಮೂಲಕ ವಿಷಾದ ವ್ಯಕ್ತಪಡಿಸಿದರೂ ಪ್ರಕರಣ ದಾಖಲಾಗಿದೆ. ಕೊಟ್ಟಾಯಂ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಪಿಸಿ. ಜಾರ್ಜ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಜಾಮೀನು ಅರ್ಜಿಯನ್ನು ಇದೇ 30ರಂದು ಪರಿಗಣಿಸಲಾಗುವುದು. ಇದು ಮೂರನೇ ಬಾರಿಗೆ ಪ್ರಕರಣವನ್ನು ಮುಂದೂಡಲಾಗಿದೆ.

