HEALTH TIPS

ಏರೋ ಇಂಡಿಯಾ-2025: ಬೆಂಗಳೂರಿಗೆ ಬಂದಿಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಹಾಗೂ ಜಾಗತಿಕ ವಾಯುಯಾನ ಕ್ಷೇತ್ರದ ಸರ್ವಶ್ರೇಷ್ಠತೆಗೆ ಈ ಸಾರಿಯ ಬೆಂಗಳೂರು 'ಏರೋ ಇಂಡಿಯಾ-2025' 'ಏರ್ ಶೋ' ಸಾಕ್ಷಿಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದಿನಿಂದ ಐದು ದಿನ ಆಯೋಜನೆಯಾಗಿರುವ 15ನೇ ಬೆಂಗಳೂರು ಏರ್ ಶೋ ನಲ್ಲಿ ಭಾಗವಹಿಸಲು ಅವರು ನವದೆಹಲಿಯಿಂದ ಇಂದು ಪ್ರಯಾಣ ಬೆಳೆಸಿದರು.

ಇದಕ್ಕೂ ಮುನ್ನ ಅವರು ಎಕ್ಸ್‌ನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಎಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಚಿವರು, ಎಚ್‌ಎಎಲ್ ಘಟಕಕ್ಕೆ ಭೇಟಿ ನೀಡಿದರು. ಮುಂದಿನ ಐದು ದಿನ ಅವರು ಬೆಂಗಳೂರಿನಲ್ಲಿದ್ದು ಏರ್‌ ಶೋದ ಮೇಲ್ವಿಚಾರಣೆ ವಹಿಸಲಿದ್ದಾರೆ.

ಯಲಹಂಕದ ವಾಯುನೆಲೆಯಲ್ಲಿ ಫೆಬ್ರುವರಿ 10 ರಿಂದ ಫೆಬ್ರುವರಿ 14ರವರೆಗೆ 'ಏರೋ ಇಂಡಿಯಾ-2025' ವೈಮಾನಿಕ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries