ಕಣ್ಣೂರು: ತಲಶ್ಶೇರಿ ಮನೋಲಿಕಾವು ಹಬ್ಬದ ಸಂದರ್ಭದಲ್ಲಿ ಪೋಲೀಸರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಮತ್ತೊಬ್ಬ ಸಿಪಿಎಂ ಕಾರ್ಯಕರ್ತನನ್ನು ಬಂಧಿಸಲಾಗಿದೆ.
ಸುಮಾರು 80 ಜನರ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೂ, ಕುಟ್ಟಿಮಾಕುಲ್ ಮೂಲದ ಸಹದೇವನ್ ಸೇರಿದಂತೆ ಇಬ್ಬರನ್ನು ಮಾತ್ರ ಇಲ್ಲಿಯವರೆಗೆ ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆ ಮನೋಲಿಕಾವು ಹಬ್ಬದ ಸಂದರ್ಭದಲ್ಲಿ ಘರ್ಷಣೆ ತಡೆಯಲು ಪ್ರಯತ್ನಿಸುತ್ತಿದ್ದಾಗ ಸಿಪಿಎಂ ಕಾರ್ಯಕರ್ತರು ಎಸ್ಐ ಸೇರಿದಂತೆ ಪೋಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ.
ಮೆರವಣಿಗೆಯ ಸಮಯದಲ್ಲಿ ಸಿಪಿಎಂ ಕಾರ್ಯಕರ್ತರು "ಇಂಕ್ವಿಲಾಬ್" ಘೋಷಣೆಗಳನ್ನು ಕೂಗಿದ ನಂತರ ಘರ್ಷಣೆ ಭುಗಿಲೆದ್ದಿತು ಎಂದು ಪೋಲೀಸ್ ಪ್ರಕರಣ ಹೇಳುತ್ತದೆ. ಏತನ್ಮಧ್ಯೆ, ಕಾವಿಲ್ ಸಂಘರ್ಷದ ವೇಳೆ ವಿವಾದವನ್ನು ಪರಿಹರಿಸಲು ಮಧ್ಯಪ್ರವೇಶಿಸಿದವರನ್ನು ಪೋಲೀಸರು ಪ್ರಕರಣದಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಸಿಪಿಎಂ ಸ್ಥಳೀಯ ನಾಯಕತ್ವ ಹೇಳಿಕೊಂಡಿದೆ.
ಆದರೆ, ಸಂಜೆ ವೇಳೆಗೆ ಮನೋಲಿಕ್ಕವುನಲ್ಲಿ ಕರ್ತವ್ಯದಲ್ಲಿದ್ದ ಪೋಲೀಸ್ ತಂಡ, ಪ್ರಕರಣದ ಮೊದಲ ಆರೋಪಿ ಮತ್ತು ರೌಡಿ ದೀಪ್ ನನ್ನು ವಶಕ್ಕೆ ತೆಗೆದುಕೊಂಡು ಪೋಲೀಸ್ ವಾಹನದೊಳಗೆ ಕರೆದೊಯ್ಯಲಾಗಿತ್ತು.. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಸಿಪಿಎಂ ಕಾರ್ಯಕರ್ತರು ಅಧಿಕಾರಿಗಳನ್ನು ತಡೆದರು. ಆರೋಪಿಯನ್ನು ಬಲವಂತವಾಗಿ ಕರೆದೊಯ್ದು ಅಲ್ಲಿಂದ ತಪ್ಪಿಸಲಾಯಿತು. ಎಸ್ಐ ಮತ್ತು ಇತರರನ್ನು ಗೇಟ್ನೊಳಗೆ ದಿಗ್ಬಂಧನಕ್ಕೊಳಪಡಿಸಿ ಬೀಗ ಜಡಿಯಲಾಯಿತು. ಬುಧವಾರದ ರಾತ್ರಿ ವೇಳೆ ನಡೆದ ದಾಳಿಯಲ್ಲಿ ದುಷ್ಕರ್ಮಿಗಳು ಕೇರಳವನ್ನು ನಾವು ಆಳುತ್ತಿದ್ದೇೀವೆ ಮತ್ತು ನಮ್ಮಲ್ಲಿ ಆಟವಾಡಿದರೆ ತಲಶ್ಶೇರಿ ಠಾಣೆಯಲ್ಲಿ ಇರುವುದಿಲ್ಲ ಎಂದು ಬೆದರಿಕೆ ಹಾಕುವ ಮೂಲಕ ನಡೆಸಲಾಗಿದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಇದರ ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಬಂದಾಗ ಹಿಂಸಾಚಾರ ನಡೆಯಿತು. ಉತ್ಸವ ನಡೆಯುತ್ತಿದ್ದರಿಂದ ಮತ್ತು ಮಹಿಳೆಯರು ಸೇರಿದಂತೆ ದೊಡ್ಡ ಜನಸಮೂಹ ಹಾಜರಿದ್ದ ಕಾರಣ, ಪೋಲೀಸರು ಹೆಚ್ಚಿನ ಬಲಪ್ರಯೋಗ ಮಾಡದೆ ಹಿಂದೆ ಸರಿದರು. ಬಂಧಿತ ಸಿಪಿಎಂ ಕಾರ್ಯಕರ್ತರಲ್ಲಿ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ. ನಂತರ ಗಲಭೆಗೆ ಯತ್ನಿಸಿದ ಮತ್ತು ನ್ಯಾಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಯಿತು. ಸಿಪಿಎಂ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.






