ಕಾಸರಗೋಡು: ಹಲವು ಅಪರಾಧ ಪ್ರಕರಣಗಳ ಆರೋಪಿ ಬಟ್ಟಂಪಾರೆ ನಿವಾಸಿ ಹಾಗು ಈಗ ಕೂಡ್ಲು ವಿವೇಕಾನಂದ ನಗರದಲ್ಲಿ ವಾಸಿಸುತ್ತಿರುವ ಕೆ.ಮಹೇಶ್(31)ನನ್ನು ಕಾಪಾ ಕಾನೂನು ಪ್ರಕಾರ ಕಾಸರಗೋಡು ಪೋಲೀಸರು ಬಂಧಿಸಿದ್ದಾರೆ.
ಈತನ ವಿರುದ್ಧ ಕಾಸರಗೋಡು ಹಾಗು ಮಂಜೇಶ್ವರ ಠಾಣೆಗಳಲ್ಲಾಗಿ ಹಲವು ಕೇಸುಗಳಿವೆ ಎಂದು ಪೋಲೀಸರು ತಿಳಿಸಿದ್ದಾರೆ. ಕೊಲೆ, ಕೊಲೆ ಯತ್ನ, ಗೂಂಡಾಗಿರಿ ಮೊದಲಾದ ಕೇಸುಗಳಲ್ಲಿ ಈತ ಆರೋಪಿಯಾಗಿದ್ದಾನೆಂದು ಪೋಲೀಸರು ತಿಳಿಸಿದ್ದಾರೆ. 2017, 21, 22, 23 ಮತ್ತು 24 ರಲ್ಲಿ ಈತನನ್ನು ಬಂಧಿಸಲಾಗಿತ್ತು.




