ತಿರುವನಂತಪುರಂ: ಟೆಕ್ನೋಪಾರ್ಕ್ ದೇಶದ ವಿವಿಧ ಭಾಗಗಳ ಬುಡಕಟ್ಟು ಯುವಕರಿಗೆ ಭೇಟಿಯಾಗುವ ಸ್ಥಳವಾಗಿದೆ.
16ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದ ಭಾಗವಾಗಿ ಛತ್ತೀಸ್ಗಢ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ 200 ಕ್ಕೂ ಹೆಚ್ಚು ಆಯ್ದ ಯುವಕರು ಟೆಕ್ನೋಪಾರ್ಕ್ಗೆ ಭೇಟಿ ನೀಡಿದರು.
ಕೇಂದ್ರ ಗೃಹ ಸಚಿವಾಲಯ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ನೆಹರು ಯುವ ಕೇಂದ್ರ ಸಂಘಟನೆ ಜಂಟಿಯಾಗಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಟೆಕ್ನೋಪಾರ್ಕ್ ಆಯ್ಕೆಯಾದ ಸ್ಥಳಗಳಲ್ಲಿ ಒಂದಾಗಿದೆ.
ಯುವಕರು ಟೆಕ್ನೋಪಾರ್ಕ್ ಸಿಇಒ ಕರ್ನಲ್ (ನಿವೃತ್ತ) ಸಂಜೀವ್ ನಾಯರ್ ಅವರೊಂದಿಗೆ ಸಂವಾದ ನಡೆಸಿದರು. ಟೆಕ್ನೋಪಾರ್ಕ್ನ ಪ್ರಮುಖ ಮೈಲಿಗಲ್ಲುಗಳು ಮತ್ತು ದೇಶದ ಐಟಿ ಕ್ಷೇತ್ರದ ಬೆಳವಣಿಗೆಗೆ ಅದರ ಕೊಡುಗೆಗಳ ಬಗ್ಗೆ ಅವರು ಮಾತನಾಡಿದರು.
ಅವರು ಛತ್ತೀಸ್ಗಢದ ದೂರದ ಪ್ರದೇಶದಲ್ಲಿ ಕಳೆದ ಶಾಲಾ ದಿನಗಳನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಂತ್ರಜ್ಞಾನದಲ್ಲಿ ಪ್ರಾವೀಣ್ಯತೆ ಸಾಧಿಸಬೇಕು ಎಂದು ಹೇಳಿದರು.
ಮೆಡ್ಟೆಕ್, ಎಡ್ಟೆಕ್, ಅಗ್ರಿಟೆಕ್, ಆಟೋಮೊಬೈಲ್ ಟೆಕ್, ಡಿಫೆನ್ಸ್, ಏರೋಸ್ಪೇಸ್ ಮುಂತಾದ ಎಲ್ಲಾ ವಲಯಗಳ ಪ್ರಗತಿಯ ಮೇಲೆ ಡಿಜಿಟಲ್ ತಂತ್ರಜ್ಞಾನವು ಭಾರಿ ಪರಿಣಾಮ ಬೀರುತ್ತಿದೆ. ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ಬ್ಲಾಕ್ಚೈನ್ ಮತ್ತು ಎಆರ್/ವಿ.ಆರ್. ನಂತಹ ಉದಯೋನ್ಮುಖ ತಂತ್ರಜ್ಞಾನಗಳು ಡಿಜಿಟಲ್ ಯುಗದ ತಾಂತ್ರಿಕ ಪ್ರಗತಿಗೆ ಉತ್ತೇಜನ ನೀಡುತ್ತಿವೆ ಎಂದು ಅವರು ಹೇಳಿದರು.
ಟೆಕ್ನೋಪಾರ್ಕ್ನ ಉಪ ಪ್ರಧಾನ ವ್ಯವಸ್ಥಾಪಕ ವಸಂತ ವರದ ಅವರು ಟೆಕ್ನೋಪಾರ್ಕ್ನ ಸಾಮಥ್ರ್ಯ, ಅವಕಾಶಗಳು ಮತ್ತು ಅಭಿವೃದ್ಧಿ ಚಟುವಟಿಕೆಗಳ ಕುರಿತು ಪ್ರಸ್ತುತಿ ನೀಡಿದರು. ಮುಂದಿನ ಪೀಳಿಗೆಗೆ ಜ್ಞಾನ ಮತ್ತು ತಂತ್ರಜ್ಞಾನವನ್ನು ವರ್ಗಾಯಿಸುವಲ್ಲಿ ಯುವಜನರು ಉತ್ತಮ ಕೊಡುಗೆ ನೀಡಲು ಸಾಧ್ಯವಾಗಬೇಕು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರಿ ಸಂಸ್ಥೆಯಾದ ಟೆಕ್ನೋಪಾರ್ಕ್ ಸೇರಿದಂತೆ ಮೂರು ಐಟಿ ಪಾರ್ಕ್ಗಳ ಮೂಲಕ ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದ ವಿವಿಧ ಸೇವೆಗಳು ಲಭ್ಯವಿದೆ. ಟೆಕ್ನೋಪಾರ್ಕ್ ಯುವಜನರಿಗೆ ಅಂತ್ಯವಿಲ್ಲದ ಅವಕಾಶಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.
ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮವು ದೇಶದ ವಿವಿಧ ಭಾಗಗಳ ಬುಡಕಟ್ಟು ಯುವಕರಿಗೆ ವೈವಿಧ್ಯಮಯ ಸಂಸ್ಕøತಿಗಳು, ನೀತಿಶಾಸ್ತ್ರ, ಭಾಷೆಗಳು, ಜೀವನಶೈಲಿ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ.



