ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಬದಿಯಡ್ಕ ಶಾಖೆಯ ಸಕ್ರೀಯ ಸದಸ್ಯ ಕೇಶವ ಭಟ್ ಕೆ ಅವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಕ್ಯಾಂಪ್ಕೋ ಸಹಾಯಧನದ ಮೊತ್ತ ರೂ.50,000 (ರೂ. ಐವತ್ತು ಸಾವಿರ) ಚೆಕ್ ನ್ನು ಅವರ ಮನೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಗುರುವಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಪದ್ಮರಾಜ ಪಟ್ಟಾಜೆ, ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ ಹಾಗೂ ಬದಿಯಡ್ಕ ಶಾಖೆಯ ವ್ಯವಸ್ಥಾಪಕ ಶ್ಯಾಂ ಪ್ರಶಾಂತ ಬಿ ಉಪಸ್ಥಿತರಿದ್ದರು.




.jpg)

