ಚೆನ್ನೈ: ಕೊಯಮತ್ತೂರು ಸ್ಫೋಟ ಪ್ರಕರಣದ ಮೊದಲ ಆರೋಪಿ ಬಾಷಾ ಅವರ ಮನೆಗೆ ಎನ್ಸಿಎಚ್ಡಿಆರ್ ಕಾರ್ಯಕರ್ತರು ಭೇಟಿ ನೀಡಿದರು. ಬಾಷಾ ಆಗಮನವು ಮಾಜಿ ನೆಕ್ಸಲೈಟ್ ಮತ್ತು ಸಂಘಟನೆಯ ಅಧ್ಯಕ್ಷರಾದ ವಿಲಯೋಡಿ ಶಿವನ್ಕುಟ್ಟಿ ಅವರ ನೇತೃತ್ವದಲ್ಲಿತ್ತು.
ಇದು ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಎನ್ಸಿಎಚ್ಡಿಆರ್ ಯ ಸಂಪರ್ಕವನ್ನು ಮತ್ತಷ್ಟು ಸ್ಪಷ್ಟಪಡಿಸಿತು. ಅಲ್-ಉಮ್ಮಾ ಭಯೋತ್ಪಾದಕ ಬಾಷಾ ಅವರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದು, ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಬಾಷಾ ಅವರ ನಿಧನದ ಬಗ್ಗೆ ಮಕ್ಕಳಿಗೆ ಸಾಂತ್ವನ ಹೇಳಲು ಈ ಭೇಟಿ ಎಂದು ಫೇಸ್ಬುಕ್ನಲ್ಲಿ ಹೇಳಲಾಗಿದೆ. ಬಾಷಾ ಕಳೆದ ತಿಂಗಳು ನಿಧನರಾದರು. ಕೊಯಮತ್ತೂರು ಸ್ಫೋಟದಲ್ಲಿ 51 ಜನರು ಸಾವನ್ನಪ್ಪಿದ್ದರು, ಇದರಲ್ಲಿ ಬಾಷಾ ಪ್ರಮುಖ ಆರೋಪಿಯಾಗಿದ್ದರು. ಬಾಷಾನ ಪುತ್ರನನ್ನು ಅಪ್ಪಿಕೊಂಡು ಸಾಂತ್ವನ ಹೇಳುತ್ತಿರುವ ಚಿತ್ರಗಳು ಸಹ ಹೊರಬಂದಿವೆ.
ಎನ್ಸಿಎಚ್ಡಿಆರ್ ಮಾನವ ಹಕ್ಕುಗಳ ಸಂಘಟನೆಯಾಗಿ ಪಾಲಕ್ಕಾಡ್ನಲ್ಲಿ ಪ್ರಾರಂಭವಾಯಿತು. ಇದು ನಿಷೇಧಿತ ಸಂಘಟನೆಗಳಾದ ಪಿಎಫ್ಐ ಮತ್ತು ಸಿಮಿ ನಾಯಕರ ನೇತೃತ್ವದಲ್ಲಿದೆ. ಪಾಪ್ಯುಲರ್ ಫ್ರಂಟ್ನ ಉಪ ಸಂಘಟನೆಯಾಗಿದ್ದ ನಿಷೇಧಿತ ಐ.ಎನ್.ಸಿ.ಎಚ್.ಆರ್.ಒ. ಬಳಿಕ ಎನ್ಸಿಎಚ್ಡಿಆರ್ ಆಗಿ ರೂಪಾಂತರಗೊಂಡಿದೆ ಎಂಬ ಬಲವಾದ ಆರೋಪವಿದೆ. ಭಯೋತ್ಪಾದನಾ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಾನೂನು ನೆರವು ನೀಡುವುದು ಈ ಸಂಘಟನೆಯ ಪ್ರಮುಖ ಗುರಿಯಾಗಿದೆ ಎಂಬ ಆರೋಪಗಳೂ ಇವೆ. ಬಾಷಾÀರ ಮನೆಗೆ ಭೇಟಿ ನೀಡಿರುವುದು ಇದನ್ನು ದೃಢಪಡಿಸುತ್ತದೆ.
ಫೆಬ್ರವರಿ 16 ರಂದು ಕೋಝಿಕ್ಕೋಡ್ನಲ್ಲಿ ನಿಗದಿಯಾಗಿದ್ದ ಎನ್ಸಿಎಚ್ಡಿಆರ್ ಸಮ್ಮೇಳನವನ್ನು ಮುಂದೂಡಲಾಗಿದೆ. ಸೂಕ್ತ ಸಮಯ ಮತ್ತು ಸ್ಥಳದಲ್ಲಿ ಸಮ್ಮೇಳನ ನಡೆಯಲಿದೆ ಎಂದು ಶಿವನ್ಕುಟ್ಟಿ ಹೇಳಿದರು. ಈ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಹಿಂದೂ ಐಕ್ಯ ವೇದಿಕೆ ನಗರ ಪೆÇಲೀಸ್ ಆಯುಕ್ತರಿಗೆ ದೂರು ನೀಡಿತ್ತು. ಕೇಂದ್ರೀಯ ಸಂಸ್ಥೆಗಳು ಸಂಸ್ಥೆಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ವರದಿಯಾಗಿದೆ.






