HEALTH TIPS

ಆಪಾದನೆ ಕೇಂದ್ರದ ಮೇಲಿರಲಿ! ಪಡಿತರ ಮತ್ತು ಸೀಮೆಎಣ್ಣೆ ಹಂಚಿಕೆಯನ್ನು ಕಾಲಾಕಾಲಕ್ಕೆ ನಿರ್ವಹಿಸದೆ ವ್ಯರ್ಥ ಮಾಡಿದ ಕೇರಳ .

ತಿರುವನಂತಪುರಂ: ಪಡಿತರ ಅಂಗಡಿಗಳಿಗೆ ಸೀಮೆಎಣ್ಣೆ ಕೇಳಿಕೊಂಡು ಬರುವ ಬಡವರಿಗೆ ಕೇಂದ್ರ ನೀಡುತ್ತಿಲ್ಲ ಎಂದು ದೂಷಿಸುವುದನ್ನು ಬಿಟ್ಟರೆ, ನಿಗದಿಪಡಿಸಿದ ಮೊತ್ತವು ಅಂಗಡಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಅಥವಾ ನಾಗರಿಕ ಸರಬರಾಜು ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಇದರಿಂದಾಗಿ, ಈ ಹಣಕಾಸು ವರ್ಷದಲ್ಲಿ ಕೇರಳ 31.2 ಲಕ್ಷ ಲೀಟರ್ ಸೀಮೆಎಣ್ಣೆಯನ್ನು ವ್ಯರ್ಥ ಮಾಡಿದೆ ಎಂಬ ಮಾಹಿತಿ ಹೊರಬೀಳುತ್ತಿದೆ.


ಕೇಂದ್ರ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಸೀಮೆಎಣ್ಣೆಯನ್ನು ನೀಡುತ್ತದೆ. ನಾಗರಿಕ ಸರಬರಾಜು ಇಲಾಖೆಯು ಜನವರಿ ಅಂತ್ಯದಲ್ಲಿ ವ್ಯಾಪಾರಿಗಳಿಗೆ ಅಂತಿಮ ತ್ರೈಮಾಸಿಕದಲ್ಲಿ ತೈಲ ಕಂಪನಿಗಳಿಂದ ತಮ್ಮ ಪಾಲನ್ನು ತೆಗೆದುಕೊಳ್ಳುವಂತೆ ಸೂಚಿಸಿತು. ಇದಲ್ಲದೆ, ಸೀಮೆಎಣ್ಣೆಯನ್ನು ಖರೀದಿಸಿ ಪಡಿತರ ಅಂಗಡಿಗಳಿಗೆ ಪೂರೈಸಬೇಕಿದ್ದ ಅನೇಕ ಡೀಲರ್‍ಗಳ ಪರವಾನಗಿಗಳನ್ನು ಸರ್ಕಾರ ನವೀಕರಿಸಿರಲಿಲ್ಲ. ಸಾಗಣೆ ವೆಚ್ಚ ಮತ್ತು ಕಡಿಮೆ ಕಮಿಷನ್ ಕಾರಣ ನೀಡಿ ಡೀಲರ್‍ಗಳಿಂದ ಸೀಮೆಎಣ್ಣೆ ಖರೀದಿಸಬೇಕಿದ್ದ ಪಡಿತರ ವ್ಯಾಪಾರಿಗಳು ಆಸಕ್ತಿ ತೋರಿಸಲಿಲ್ಲ.

ಈ ಕಾರಣಗಳಿಂದ ಇದೀಗ ಸೀಮೆಎಣ್ಣೆ ಪೂರೈಕೆ-ವಿತರಣೆ ಸಂಪೂರ್ಣ ನಿಂತುಹೋಗಿದೆ. ಕಾಲಾಕಾಲಕ್ಕೆ ಅಗತ್ಯದ ವರದಿಯಾಗಲಿ, ವ್ಯವಸ್ಥೆಯನ್ನಾಗಲಿ ಮಾಡದ ರಾಜ್ಯ ಸರ್ಕಾರ ಜನರನ್ನು ವಂಚಿಸುತ್ತಿರುವುದು ಖೇದಕರವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries