HEALTH TIPS

ಕೊಟ್ಟಾಯಂ ಮತ್ತು ಪಾಲಕ್ಕಾಡ್‍ನಲ್ಲಿ ಎಸ್‍ಡಿಪಿಐ ನಾಯಕರ ಮನೆಗಳ ಮೇಲೆ ಇಡಿ ದಾಳಿ

ನವದೆಹಲಿ: ಕೊಟ್ಟಾಯಂ ಮತ್ತು ಪಾಲಕ್ಕಾಡ್ ಸೇರಿದಂತೆ ದೇಶಾದ್ಯಂತದ ಎಸ್.ಡಿ.ಪಿ.ಐ  ಕೇಂದ್ರಗಳ ಮೇಲೆ ಮತ್ತೆ ಇ.ಡಿ. ದಾಳಿ ನಡೆಸಿದೆ. ತಮಿಳುನಾಡಿನ ಮೆಟ್ಟುಪಾಳಯಂ, ಕೊಯಮತ್ತೂರು, ಆರ್ಕಾಟ್ ಮತ್ತು ವೆಲ್ಲೂರು, ರಾಜಸ್ಥಾನದ ಕೋಟಾ ಮತ್ತು ಭಿಲ್ವಾರಾ ಮತ್ತು ಬಂಗಾಳದ ಕೋಲ್ಕತ್ತಾದಲ್ಲಿ ದಾಳಿ ನಡೆಸಲಾಯಿತು.

ಫೈಜಿ ನೀಡಿದ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಗಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಎಸ್‍ಡಿಪಿಐ ಅಖಿಲ ಭಾರತ ಅಧ್ಯಕ್ಷ  ಪಾಲಕ್ಕಾಡ್‍ನ ಒಟ್ಟಪಾಲಂನ ಪನಾಮನ್ನಯಿಲ್‍ನಲ್ಲಿರುವ ಎಂ.ಕೆ.ಕಬೀರ್ ಅವರ ಐಷಾರಾಮಿ ಮನೆಯಲ್ಲಿ ದಾಳಿ ನಡೆಸಲಾಯಿತು. ಇಡಿ ಕಬೀರ್ ಅವರ ಸಂಬಂಧಿಯನ್ನೂ ಹುಡುಕುತ್ತಿದೆ, ಅವರು ವಿದೇಶದಲ್ಲಿದ್ದಾರೆ. ದೇಶದ ಹೊರಗೆ ಪಾಫ್ಯುಲರ್ ಫ್ರಂಟ್‍ಗಾಗಿ ಎಸ್‍ಡಿಪಿಐ ಹಣ ಸಂಗ್ರಹಿಸುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಯಿತು.

ಈ ದಾಳಿಯಲ್ಲಿ ಇಡಿಯ ದೆಹಲಿ ಮತ್ತು ಕೋಝಿಕ್ಕೋಡ್ ಘಟಕಗಳೊಂದಿಗೆ ಫೆಡರಲ್ ಬ್ಯಾಂಕ್ ಅಧಿಕಾರಿಗಳು ಸಹ ಭಾಗವಹಿಸಿದ್ದರು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಶೋಧ ಕಾರ್ಯಾಚರಣೆ ಮಧ್ಯಾಹ್ನದವರೆಗೂ ಮುಂದುವರೆಯಿತು. ಕೊಟ್ಟಾಯಂನ ವಜೂರ್‍ನಲ್ಲಿರುವ ಚಾಮಪತÀಲ್ ಎಸ್‍ಬಿಟಿ ಜಂಕ್ಷನ್‍ನಲ್ಲಿರುವ ಎಸ್‍ಡಿಪಿಐ ನಾಯಕ ನಿಶಾದ್ ನಡಕ್ಕಮುರಿಯಿಲ್ ಅವರ ಮನೆಯಲ್ಲಿ ಶೋಧ ನಡೆಸಲಾಯಿತು. ತನಿಖಾ ತಂಡ ಬೆಳಿಗ್ಗೆ 9.30ಕ್ಕೆ ಆಗಮಿಸಿತ್ತು. ನಿಶಾದ್ ನಿಷೇಧಿತ ಸಂಘಟನೆ ಪಿಎಫ್‍ಐನ ವಿಭಾಗೀಯ ಕಾರ್ಯದರ್ಶಿಯಾಗಿದ್ದ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries