ಕಾಸರಗೋಡು: ತನ್ನ ಪತ್ನಿಗೆ ಮೊಬೈಲಲ್ಲಿ ಮುತ್ತಲಾಕ್ ಮೂಲಕ ವಿಚ್ಛೇದನ ನೀಡಿದ ಯುವಕನ ವಿರುದ್ಧ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೆಲ್ಲಿಕಟ್ಟೆ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ರಜಾಕ್ ವಿರುದ್ಧ ಈ ಕೇಸು.
ಅಬ್ದುಲ್ ಖಾದರ್ ಪತ್ನಿ, ಹೊಸದುರ್ಗ ಕಲ್ಲೂರಾವಿ ನಿವಾಸಿ ಯುವತಿ ನೀಡಿದ ದೂರಿನ ಮೇರೆಗೆ ಈ ಕೇಸು. ವಿದೇಶದಲ್ಲಿ ಕೆಲಸದಲ್ಲಿರುವ ಪತಿ ಅಬ್ದುಲ್ ರಜಾಕ್ ಫೆ. 21ರಂದು ನನ್ನ ತಂದೆ ಮೊಬೈಲ್ಗೆ ಕರೆಮಾಡಿ, ಮುತ್ತಲಾಕ್ ಹೇಳುವ ಸಂದೇಶ ಕಳುಹಿಸಿಕೊಟ್ಟಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಪತಿಯ ತಾಯಿ ಹಾಗೂ ಆತನ ಇಬ್ಬರು ಸಹೋದರಿಯರು ಸೇರಿ ತನಗೆ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದು, ಆಹಾರವನ್ನು ನೀಡದೆ, ಕೊಠಡಿಯಲ್ಲಿ ಕೂಡಿಹಾಕಿ ದೌರ್ಜನ್ಯವೆಸಗುತ್ತಿದ್ದಾರೆ. ಕಳೆದ ಎರಡುವರೆ ವರ್ಷಗಳಿಂದ ಈ ಯಾತನೆ ಅನುಭವಿಸುತ್ತಿದ್ದೇನೆ. ಈ ಬಗ್ಗೆ ಪತಿಗೆ ಮಾಹಿತಿ ನೀಡಿದ್ದು, ನಂತರವೂ ಪತಿ ತನ್ನೊಂದಿಗೆ ಅನ್ಯೋನ್ಯವಾಗಿದ್ದರು. ನಂತರ ಎಕಾಏಕಿ ಮುತ್ತಲಾಕ್ ಮೂಲಕ ವಿಚ್ಛೇದನ ಕೋರಿ ಸಂದೇಶ ರವಾನಿಸಿರುವುದು ಆಘಾತ ತಂದೊಡ್ಡಿದೆ ಎಂದೂ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಯುವತಿ ವಿವಾಹ 2022ರಲ್ಲಿ ಅಬ್ದುಲ್ಖಾದರ್ ಜತೆ ನಡೆದಿದ್ದು, ಮದುವೆ ಸಂದರ್ಭ ಹಾಗೂ ನಂತರದ ದಿನಗಳಲ್ಲಿ 12ಲಕ್ಷ ರೂ. ವರದಕ್ಷಿಣೆ ರೂಪದಲ್ಲಿ ಪಡೆದುಕೊಂಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.




.jpg)

