ಕಾಸರಗೋಡು: ಕಾಞಂಗಾಡು ಚಂದ್ರಗಿರಿ ರಸ್ತೆಯಲ್ಲಿ ತ್ರಿಕ್ಕನ್ನಾಡು ಸಮೀಪ ಕಾರಿನಲ್ಲಿ ಸಾಗಿಸುತ್ತಿದ್ದ 1.175ಕೋಟಿ ರೂ. ಕಾಳಧನ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ನಿವಾಸಿ ಅಬ್ದುಲ್ ಖಾದರ್ ಎಂ.ಎಸ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಹಲವು ಸಮಯದ ನಂತರ ಕಾಸರಗೋಡಿನಲ್ಲಿ ಇಷ್ಟೊಂದು ಪ್ರಮಾಣದ ಕಾಳಧನ ಇದೇ ಮೊದಲಬಾರಿಗೆ ವಶಪಡಿಸಿಕೊಳ್ಳಲಾಗುತ್ತಿದೆ. ಅಬ್ದುಲ್ ಖಾದರ್ ಕಾಯಂ ಆಗಿ ಕಾಳಧನ ಸಾಗಿಸುತ್ತಿರುವ ವ್ಯಕ್ತಿಯಾಗಿರುವುದಾಗಿ ಸಂಶಯಿಸಲಾಗಿದೆ.
ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭಾರತ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ ವಾಹನ ತಪಾಸಣೆ ನಡೆಸುವ ಮಧ್ಯೆ ಕಾರಿನ ಸೀಟಿನ ತಳಭಾಗದಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ಕೋಶದಲ್ಲಿ ಒಂದು ಕೋಟಿಗೂ ಮಿಕ್ಕಿದ ಹಣ ವಶ ಪಡಿಸಲಾಗಿತ್ತು. ಡಿವೈಎಸ್ಪಿ ವಿ.ವಿ ಮನೋಜ್, ಬೇಕಲ ಇನ್ಸ್ಪೆಕ್ಟರ್ ಕೆ. ಎ. ಶೈನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಪಾಲಕುನ್ನಿನಿಂದ ಕಾಞಂಗಾಡು ಭಾಗಕ್ಕೆ ಕಾಳಧನ ಸಾಗಿಸುತ್ತಿದ್ದಾಗ ಪೊಲೀಸರು ಕಾರುತಡೆದು ಕಾರ್ಯಾಚರಣೆ ನಡೆಸಿದ್ದಾರೆ.






