HEALTH TIPS

ಸಾಹಿತಿ ಹರೀಶ ಪೆರ್ಲರಿಗೆ ಕ.ಸಾ.ಪದಿಂದ ಅಭಿನಂದನೆ

ಪೆರ್ಲ : ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಗಳಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ 'ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ' ಎಂಬ ಕಾರ್ಯಕ್ರಮದ ಅಂಗವಾಗಿ ಸಾಹಿತಿ, ಅಂಕಣಕಾರ ಹರೀಶ ಪೆರ್ಲ ಅವರನ್ನು ಪೆರ್ಲದಲ್ಲಿರುವ ಅವರ ನಿವಾಸ 'ಗುಲಾಬಿ'ಯಲ್ಲಿ ಅಭಿನಂದಿಸಲಾಯಿತು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು  ಹರೀಶ ಪೆರ್ಲರನ್ನು  ಶಾಲು ಹೊದೆಸಿ, ಸ್ಮರಣಿಕೆ ನೀಡಿ ಅಭಿನಂದಿಸಿದರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ.ಕೆ ಉಳಿಯತ್ತಡ್ಕ ಅಭಿನಂದನಾ ಭಾಷಣ ಮಾಡಿದರು. ಸರಳ ಸಜ್ಜನಿಕೆಯ ಸ್ನೇಹಜೀವಿಯಾಗಿರುವ ಹರೀಶ ಪೆರ್ಲರು ಅನುಭವ ಮತ್ತು ಅಧ್ಯಯನದಿಂದ ಮಾಗಿದವರು. ಕೇರಳದ ನ್ಯಾಯಾಂಗ ಇಲಾಖೆಯಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿರುವ ಹರೀಶ ಪೆರ್ಲರು ಹಾಸ್ಯ ಬರಹಗಾರರಾಗಿ, ಕತೆಗಾರರಾಗಿ, ಅಂಕಣ ಬರಹಗಾರರಾಗಿ ಪ್ರಸಿದ್ಧರು. ವಿವಿಧ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದವರು. ಹಾಸ್ಯಾಯನ, ನಗೆಯ ಬಗೆ, ಬದುಕ ಬಿಡದವರು, ಬೆರ್ಚಪ್ಪ, ಹರಿವಾಸರ ಮೊದಲಾದ ಕೃತಿಗಳ ಮೂಲಕ ಮತ್ತು ಹಲವಾರು ಅಂಕಣ ಬರಹಗಳ ಮೂಲಕ ತಾನೊಬ್ಬ ಉತ್ತಮ ಸಾಹಿತಿ ಎಂಬುದನ್ನು ಸಾಬೀತುಪಡಿಸಿದವರು ಎಂದು ಅವರು ಹೇಳಿದರು. 

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ. ಎನ್ ಮೂಡಿತ್ತಾಯ, ಮಹಮ್ಮದ್ ಅಲಿ ಪೆರ್ಲ, ಮೀಯಪದವು, ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಪ್ರಾಧ್ಯಾಪಕ ಹರೀಶ್ ನಾಯಕ್, ಹರೀಶ ಪೆರ್ಲರ ಬದುಕು, ಬರಹ, ವ್ಯಕ್ತಿತ್ವದ ಕುರಿತು ಮಾತನಾಡಿದರು. ಹರೀಶ ಪೆರ್ಲ  ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಹರೀಶ್ ಪೆರ್ಲರ ಸಹೋದರಿ ಗೀತಾ. ಜಿ ನಾಯಕ್, ಅತ್ತಿಗೆ ವಿಜಯಲಕ್ಷ್ಮಿ. ಪಿ ಶೆಣೈ, ಆಯಿಶಾ.ಎ .ಎ ಪೆರ್ಲ, ಪ್ರೇಮಾ ಶೆಟ್ಟಿ ಮೂಲ್ಕಿ, ಆನಂದ ರೈ ಅಡ್ಕಸ್ಥಳ, ಸುಭಾಷ್ ಪೆರ್ಲ, ದಿಯಾ ಮುಲ್ಕಿ, ವನಜಾಕ್ಷಿ ಚಂಬ್ರಕಾನ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ನಿವೃತ್ತ ಶಿಕ್ಷಕ ಉಮೇಶ.ಕೆ. ಪೆರ್ಲ ವಂದಿಸಿದಿರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries