HEALTH TIPS

ವರ್ಷದ ಉದ್ಯಮಿ ಯೋಜನೆಗಾಗಿ ಅಪ್ಸಾ ಪ್ರಶಸ್ತಿಗೆ ಭಾಜನವಾದ ಕೇರಳ: ‘ಉದ್ಯಮಶೀಲತಾ ವರ್ಷ' ಯೋಜನೆ ಕೇರಳದ ಉದ್ಯಮಶೀಲತಾ ಸಾಮಥ್ರ್ಯವನ್ನು ತೆರೆದಿಟ್ಟಿದೆ: ಸಚಿವ ಪಿ. ರಾಜೀವ್

ತಿರುವನಂತಪುರಂ: ಎಂಎಸ್‍ಎಂಇ ವಲಯಕ್ಕೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಕೇರಳ ಸರ್ಕಾರ 2022-23 ರಲ್ಲಿ ಪ್ರಾರಂಭಿಸಿದ ಉದ್ಯಮಶೀಲತಾ ವರ್ಷ ಯೋಜನೆಯು ರಾಜ್ಯವನ್ನು ಕೈಗಾರಿಕಾ ಮತ್ತು ಉದ್ಯಮಶೀಲ ಸ್ನೇಹಿ ಪರಿಸರ ವ್ಯವಸ್ಥೆಯಾಗಿ ಪರಿವರ್ತಿಸಲು ಪ್ರಚೋದನೆಯನ್ನು ನೀಡಿದೆ ಎಂದು ಕೈಗಾರಿಕಾ ಕಾನೂನು ಮತ್ತು ಕೈಮಗ್ಗ ಸಚಿವ ಪಿ. ರಾಜೀವ್ ಹೇಳಿರುವರು.

ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಅಮೇರಿಕನ್ ಸೊಸೈಟಿ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (ಎ.ಎಸ್.ಪಿ.ಎ.) ನ ವಾರ್ಷಿಕ ಸಮ್ಮೇಳನದಲ್ಲಿ ಅವರು 'ಉದ್ಯಮಶೀಲತೆಯ ವರ್ಷ: ಕೇರಳದ ಉದ್ಯಮಶೀಲತಾ ಪರಿಸರ ವ್ಯವಸ್ಥೆ ಮತ್ತು ಅದರ ಯಶಸ್ವಿ ಅನುμÁ್ಠನ' ಎಂಬ ವಿಷಯದ ಕುರಿತು ಆನ್‍ಲೈನ್‍ನಲ್ಲಿ ಮಾತನಾಡುತ್ತಿದ್ದರು.

ಉದ್ಯಮಶೀಲತಾ ವರ್ಷದ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಸಮ್ಮೇಳನದಲ್ಲಿ ಕೇರಳಕ್ಕೆ ಸಾರ್ವಜನಿಕ ಆಡಳಿತದಲ್ಲಿ ನಾವೀನ್ಯತೆಗಾಗಿ ಅಪ್ಸಾ ಪ್ರಶಸ್ತಿಯನ್ನು ನೀಡಲಾಯಿತು. ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಮಾರಂಭದಲ್ಲಿ ಕೇರಳ ಸರ್ಕಾರದ ಪರವಾಗಿ ಕೇಂದ್ರ ಪ್ರವಾಸೋದ್ಯಮದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕೇರಳ ಕೈಗಾರಿಕಾ ಇಲಾಖೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಮನ್ ಬಿಲ್ಲಾ ಪ್ರಶಸ್ತಿಯನ್ನು ಸ್ವೀಕರಿಸಿದರು.

ಅಪ್ಸಾ ಎಂಬುದು ಯುನೈಟೆಡ್ ಸ್ಟೇಟ್ಸ್‍ನಲ್ಲಿ ಸರ್ಕಾರಿ ನೀತಿ, ಸಾರ್ವಜನಿಕ ಆಡಳಿತ ಮತ್ತು ಇತರ ಸೇವೆಗಳ ಕ್ಷೇತ್ರಗಳಲ್ಲಿ ಕೆಲಸ ಮಾಡುವ 10,000 ಕ್ಕೂ ಹೆಚ್ಚು ವೃತ್ತಿಪರರ ಸಂಘಟನೆಯಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries