ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ತರವಾಡಿನಲ್ಲಿ ಮಂಗಳವಾರದಿಂದ ವಾರ್ಷಿಕ ಧರ್ಮನೇಮೋತ್ಸವ ನೂರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಸಂಪನ್ನಗೊಂಡಿತು.
ಮಂಗಳವಾರ ಸಂಜೆ 8 ಕ್ಕೆ ಶ್ರೀದುರ್ಗಾಪೂಜೆ, ದೈವಗಳ ತೊಡಂಙಲ್, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಬುಧವಾರ ಮುಂಜಾನೆ 5 ರಿಂದ ಈರ್ವರು ಉಳ್ಳಾಕ್ಲುಗಳ ನೇಮ ನಡೆಯಿತು. ಬಳಿಕ ಶ್ರೀಧೂಮಾವತಿ ದೈವಗಳ ನೇಮ, ಧರ್ಮದೈವ ಪಂಜುರ್ಲಿ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ದೈವಪಾತ್ರಿಗಳಾಗಿ ರಾಮ, ರಾಮ ಕೆ ಹಾಗೂ ಶಿವರಾಮ ನಿರ್ವಹಿಸಿದರು. ಪುದುಕೋಳಿ ಶ್ರೀಕೃಷ್ಣ ಭಟ್, ಗಣೇಶ ಭಟ್ ಪುದುಕೋಳಿ, ಶಂಕರ ಭಟ್ ರಾಮಕುಂಜ, ಗೋವಿಂದ ಭಟ್ ರಾಮಕುಂಜ ನೇತೃತ್ವ ವಹಿಸಿದ್ದರು. ಸ್ಥಳೀಯ ಭಕ್ತಾದಿಗಳು ಪಾಲ್ಗೊಂಡಿದ್ದರು.




.jpg)
.jpg)
.jpg)
