HEALTH TIPS

ನಿಜವಾಗ್ಲೂ ಹೆಚ್ಚು ವರಿಯೆ: ಐಎಎಸ್ ಅಧಿಕಾರಿಗಳಿಗೆ ಸಂಬಂಧವಿಲ್ಲದ ಇಲಾಖೆಗಳಲ್ಲಿ ನಿಯೋಜನೆ: ದಕ್ಷತೆಯ ಬಗ್ಗೆ ಕಾಳಜಿ ವಹಿಸುವವರು ಯಾರು?

ತಿರುವನಂತಪುರಂ: ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳನ್ನು ಸಂಬಂಧವಿಲ್ಲದ ಬಹು ಪ್ರಮುಖ ಹುದ್ದೆಗಳಿಗೆ ನಿಯೋಜಿಸುವುದು ಇಲಾಖೆಯ ದಕ್ಷತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಂದಾಜಿಸಲಾಗಿದೆ.

ಅವರು ಸಾಮಾನ್ಯವಾಗಿ ಸಂಬಂಧವಿಲ್ಲದ ಇಲಾಖೆಗಳ ಜವಾಬ್ದಾರಿಗಳನ್ನು ಒಂದೇ ಸಮಯದಲ್ಲಿ ಹೊಂದಿರುತ್ತಾರೆ. ಇದು ಹೆಚ್ಚಾಗಿ ಅವರು ವಿಷಯವನ್ನು ಅಧ್ಯಯನ ಮಾಡಲು ಅಥವಾ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವುದಿಲ್ಲ. ಐಎಎಸ್ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ಮತ್ತೆ ಬದಲಾಗಬಹುದಾದ್ದರಿಂದ ಇಲಾಖೆಗಳ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಆಸಕ್ತಿ ಇರುವುದೂ ಇಲ್ಲ. ಆದ್ದರಿಂದ, ರಾಜಕೀಯ ಹಿತಾಸಕ್ತಿಗಳೊಂದಿಗೆ ಅಧೀನ ಅಧಿಕಾರಿಗಳ ಇಚ್ಛೆಯಂತೆ ವಿಷಯಗಳು ನಡೆಯುತ್ತಿವೆ.

ಇತ್ತೀಚಿನ ಬದಲಾವಣೆಯಲ್ಲಿ, ಡಾ. ಶರ್ಮಿಳಾ ಮೇರಿ ಜೋಸೆಫ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯದರ್ಶಿಯಾಗಿದ್ದಾರೆ. ಆದರೆ ಅವರಿಗೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಮತ್ತೊಂದೆಡೆ, ಕೃಷಿ ನಿರ್ದೇಶಕ ಡಾ. ಶ್ರೀರಾಮ್ ವೆಂಕಟರಾಮನ್ ಅವರು ಕೆಎಫ್‍ಸಿ ಎಂಡಿಯ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದಾರೆ. ಕೈಗಾರಿಕಾ ಇಲಾಖೆಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿ ಜೂಲಾ ಥಾಮಸ್ ಅವರಿಗೆ ಕೆಟಿಡಿಎಫ್‍ಸಿ ಎಂಡಿ ಹೆಚ್ಚುವರಿ ಜವಾಬ್ದಾರಿ ಇದೆ. ಕೈಗಾರಿಕೆಗಳ ನಿರ್ದೇಶಕ ಮುಹಮ್ಮದ್ ಅಲಿ ಅವರು ಕೆಎಸ್‍ಐಡಿಸಿಯ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನೂ ಹೊಂದಿದ್ದಾರೆ. ಐಟಿ ವಿಶೇಷ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶ್ರೀರಾಮ್ ಸಾಂಬಶಿವ ರಾವ್, ಪರಿಸರ ವಿಶೇಷ ಕಾರ್ಯದರ್ಶಿ ಮತ್ತು ಸರ್ವೇ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಅಭಿವೃದ್ಧಿ ನಿರ್ದೇಶಕಿ ಹರಿತಾ ವಿ ಕುಮಾರ್ ಅವರಿಗೆ ಸ್ಥಳೀಯಾಡಳಿತ ಇಲಾಖೆಯ ಪ್ರಧಾನ ನಿರ್ದೇಶಕಿ ಹುದ್ದೆ ಹೆಚ್ಚುವರಿಯಾಗಿ ನೀಡಲಾಗಿದೆ. ಐಟಿ ಮಿಷನ್ ನಿರ್ದೇಶಕ ಸಂದೀಪ್ ಕುಮಾರ್ ಅವರಿಗೆ ರಿಮೋಟ್ ಸೆನ್ಸಿಂಗ್ ಕೇಂದ್ರದ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ.

ತಮಗೆ ಆಸಕ್ತಿಯ ಅಥವಾ ಒಂದು ವಿಷಯದಲ್ಲಿ ಜ್ಞಾನವಂತರಾದವರನ್ನು ಮತ್ತೊಂದು ವಿಭಾಗಕ್ಕೆ ನಿಯೋಜಿಸುವುದರಿಂದ ಎಷ್ಟೆಲ್ಲ ದುಷ್ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ಗ್ರಹಿಸದಷ್ಟು ಅಧಿಕೃತರು ಬದಲಾಗಿರುವುದರಿಂದ ಪಾಪದ ಜನ ಸಾಮಾನ್ಯರು ಏನನ್ನು ನಿರೀಕ್ಷಿಸಬಹುದು.? 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries