HEALTH TIPS

ದಿವ್ಯಾ ಎಸ್ ಅಯ್ಯರ್ ಅವರ ಫೇಸ್‍ಬುಕ್ ಪೋಸ್ಟ್‍ಗೆ ಅಶ್ಲೀಲ ಕಾಮೆಂಟ್: ದಲಿತ ನಾಯಕನನ್ನು ಅಮಾನತುಗೊಳಿಸಿದ ಕಾಂಗ್ರೆಸ್

ಕೊಚ್ಚಿ: ಐಎಎಸ್ ಅಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರ ಫೇಸ್‍ಬುಕ್ ಪೋಸ್ಟ್ ಅಡಿಯಲ್ಲಿ ಅಶ್ಲೀಲ ಕಾಮೆಂಟ್‍ಗಳನ್ನು ಪೋಸ್ಟ್ ಮಾಡಿದ ದಲಿತ ನಾಯಕನನ್ನು ಕಾಂಗ್ರೆಸ್ ಅಮಾನತುಗೊಳಿಸಿದೆ. ಕಾಂಗ್ರೆಸ್ ಜಿಲ್ಲಾ ನಾಯಕತ್ವವು ದಲಿತ ಕಾಂಗ್ರೆಸ್ ಎರ್ನಾಕುಳಂ ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಪ್ರಭಾಕರನ್ ಅವರನ್ನು ಅಮಾನತುಗೊಳಿಸಿದೆ.

ಎರ್ನಾಕುಳಂನ ಕಾಂಜಿರಾಮಟ್ಟಂ ಮೂಲದ ಟಿ.ಕೆ. ಪ್ರಭಾಕರನ್, ವಿ.ಎಂ. ಸುಧೀರನ್ ಅವರ ಫೇಸ್‍ಬುಕ್ ಕಾಮೆಂಟ್ ಅಡಿಯಲ್ಲಿ "ದಿವ್ಯಾಗೆ ಯಾವುದೇ ಔಚಿತ್ಯದ ಪ್ರಜ್ಞೆ ಇಲ್ಲ" ಎಂದು ಅಶ್ಲೀಲ ಕಾಮೆಂಟ್ ಪೋಸ್ಟ್ ಮಾಡಿದ್ದರು. ಸಿಪಿಎಂ ನಾಯಕ ಕೆ.ಕೆ. ರಾಗೇಶ್ ಅವರನ್ನು ಹೊಗಳಿದ ದಿವ್ಯಾ ಎಸ್ ಅಯ್ಯರ್ ಅವರ ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ಪ್ರಶ್ನಿಸಿದ್ದಾರೆ.

ಡಿಸಿಸಿ ಅಧ್ಯಕ್ಷ ಮುಹಮ್ಮದ್ ಶಿಯಾಸ್ ಅವರು ಹೇಳಿಕೆ ನೀಡಿ, ಕಾಂಗ್ರೆಸ್ ಸಂಸ್ಕøತಿ ಮತ್ತು ಸಂಪ್ರದಾಯಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಮನವರಿಕೆಯಾದ ಕಾರಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ ಎಂದು ಘೋಷಿಸಿದರು. ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಕೆ.ಕೆ. ರಾಗೇಶ್ ಅವರು ಸಿಪಿಎಂ ಕಣ್ಣೂರು ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ ದಿವ್ಯಾ ಎಸ್. ಅಯ್ಯರ್ ಅವರ ಅಭಿನಂದನಾ ಪೋಸ್ಟ್ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅನೇಕ ಕಾಂಗ್ರೆಸ್ ನಾಯಕರು ದಿವ್ಯಾ ಅವರನ್ನು ಟೀಕಿಸಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries