HEALTH TIPS

Chenab Rail Bridge: 19ರಿಂದ ಕಟ್ರಾ-ಶ್ರೀನಗರ ರೈಲು ಸಂಚಾರ

ನವದೆಹಲಿ: ಜಮ್ಮುವಿನ ಕಟ್ರಾ ಹಾಗೂ ಶ್ರೀನಗರ ನಡುವಿನ ಮೊದಲ ರೈಲು ಸಂಚಾರಕ್ಕೆ ಇದೇ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಲಿದ್ದಾರೆ.

ಈ ಮಾರ್ಗವು ದೇಶದ ರೈಲ್ವೆ ಜಾಲಕ್ಕೆ ಕಾಶ್ಮೀರ ಕಣಿವೆಯನ್ನು ನೇರವಾಗಿ ಸಂಪರ್ಕಿಸಲಿದೆ.

ಚಿನಾಬ್ ನದಿಗೆ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ಕಮಾನು ಸೇತುವೆಯನ್ನು ಇದೇ ದಿನದಂದು ಪ್ರಧಾನಿ ಉದ್ಘಾಟಿಸಲಿದ್ದಾರೆ.

ಈ ಸೇತುವೆ ನಿರ್ಮಾಣಕ್ಕೆ 30 ಸಾವಿರ ಟನ್‌ ಉಕ್ಕು ಬಳಸಲಾಗಿದೆ. ಇದು ಐಫೆಲ್‌ ಟವರ್‌ಗಿಂತ 35 ಮೀಟರ್‌ ಎತ್ತರವಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ರಾ- ಶ್ರೀನಗರದ ನಡುವೆ ವಂದೇ ಭಾರತ್ ರೈಲು ಸಂಚರಿಸಲಿದ್ದು, ಆರರಿಂದ ಏಳು ತಾಸಿನ ಪ್ರಯಾಣದ ಅವಧಿ ಮೂರು ತಾಸುಗಳಿಗೆ ಇಳಿಯಲಿದೆ. ಈ ಮಾರ್ಗದಲ್ಲಿ ಸಂಚರಿಸಲಿಕ್ಕಾಗಿಯೇ ವಂದೇ ಭಾರತ್‌ ರೈಲನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries