"ಯಾವುದಾದರೂ ಒಂದು ವಿಷಯವನ್ನು ತೆಗೆದು ಹಾಕಬೇಕು ಎಂದು ನಿರ್ದೇಶನ ನೀಡಲಾರದಷ್ಟು ನ್ಯಾಯಾಲಯ ಅಧಿಕಾರ ರಹಿತ ಎಂದು ನಾವು ಹೇಳುತ್ತಿಲ್ಲ. ಆದರೆ, ಪ್ರಕಟವಾಗಿರುವ ವಿಷಯವು ಅವಹೇಳನಕಾರಿಯಾಗಿರುವುದು ಪತ್ತೆಯಾಗಿದೆ ಎಂಬುದು ಮೊದಲಿಗೆ ಮೇಲ್ನೋಟಕ್ಕೆ ಕಂಡು ಬರಬೇಕಿದೆ. ಇದರರ್ಥ, ಯಾವುದೇ ವಿಷಯ ನಿಂದನಾತ್ಮಕವಾಗಿದೆ ಎಂಬ ಕಾರಣಗಳನ್ನು ಮೇಲ್ನೋಟದ ಶೋಧಗಳು ಒದಗಿಸಬೇಕು ಎಂಬುದು ಪೂರ್ವ ಶರತ್ತಾಗಿದೆ" ನ್ಯಾ. ಅಭಯ್ ಎಸ್. ಓಕಾ ಹಾಗೂ ಉಜ್ಜಲ್ ಭುಯಾನ್ ಅವರನ್ನೊಳಗೊಂಡಿದ್ದ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ವಿಕಿಮೀಡಿಯಾ ಫೌಂಡೇಶನ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ವಿಕಿಪೀಡಿಯಾ ಪುಟದಲ್ಲಿದ್ದ ಮಾಹಿತಿಯು ಅದರ ವೇದಿಕೆಯ ಸ್ವಂತದ್ದಲ್ಲ, ಬದಲಿಗೆ, ಇನ್ನಿತರ ಮಾಧ್ಯಮ ಸಂಸ್ಥೆಗಳಿಂದ ಪೂರೈಸಲಾಗಿದ್ದ ಮಾಹಿತಿ ಎಂದು ವಾದಿಸಿದರು.
"ಈ ಕುರಿತು ಚರ್ಚೆ ನಡೆಯಬಾರದು ಎಂದಿಲ್ಲ. ನಮ್ಮಲ್ಲಿ ಮುಕ್ತ ನ್ಯಾಯ ವ್ಯವಸ್ಥೆಯಿದೆ. ಆದರೆ, ಇದರಿಂದ ಉತ್ಸಾಹ ಕುಗ್ಗಿಸುವ ಪರಿಣಾಮವುಂಟಾಗಲಿದೆ" ಎಂದೂ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಯಾವುದೇ ವಿಷಯವನ್ನು ತೆಗೆದು ಹಾಕಲು ಅದರಲ್ಲಿ ಆಕ್ಷೇಪಾರ್ಹ ಸಂಗತಿ ಕಂಡು ಬಂದಿದೆ ಎಂಬುದೊಂದೇ ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಕೂಡಾ ಅಭಿಪ್ರಾಯ ಪಟ್ಟಿತು.

